ಕರುನಾಡು
ಹಸಿರು ಸಿರಿಯ ವೈಭವದಿ
ಕಂಗೊಳಿಸುವ ಕರುನಾಡು
ಸಹ್ಯಾದ್ರಿ ಜೋಗ ಕಾವೇರಿ
ಮೆರೆವ ಚೆಲು ನೋಡು||೧||
ಶ್ರೀಗಂಧದ ಬೀಡಿನಲಿ ಉಲಿವ
ನುಡಿಯಿದುವೇ ನವಿರು
ಕಲ್ಲುಗಳ ಕೆತ್ತನೆಯಲಿ ಅರಳಿದ
ಶಿಲ್ಪಕಲೆಗಳ ತವರು||೨||
ಪಂಪರನ್ನರು ಸಂಪನ್ನಗೈದ
ಕಾವ್ಯದ ಸೊಬಗು
ಮರಿಕೋಗಿಲೆಗಳ ಕಂಠದಲಿ
ಮೂಡಲೆನಿತು ಬೆರಗು||೩||
ವೀರಶೂರ ಗಂಡುಗಲಿಗಳು
ಆಳಿದ ಹೆಮ್ಮೆಯ ನಾಡು
ದಾಳಿಯನೆದುರಿಸಿ ಕೆಚ್ಚೆದೆಯಲಿ
ಬಾಳಿದ ಮೈಸೂರಿನ ಬೀಡು||೪||
ಹೊನ್ನಿನನುಡಿ ಮಹಿಮೆಯ ಗುಡಿ
ಸರ್ವರ ಮನವ ಸೆಳೆಯುತಿದೆ
ಕೇಳಲು ಕನ್ನಡ ಕಣ ಕಣದಲ್ಲೂ
ಅಭಿಮಾನದ ಸುಧೆ ಹರಿಯುತಿದೆ||೫||
ಫಲವನು ನೀಡಿ ಗೆಲುವನು ಬಯಸಿದೆ
ಕನ್ನಡದ ಕಂಪಿನ ಭುವಿಯು
ಕನ್ನಡ ಮಣ್ಣಲಿ ಜನಿಸಿರಲೀಗ
ಜೀವನ ಸಾರ್ಥಕವೆನಿಸುತಿದೆ.||೬||
✍️... ಅನಿತಾ ಜಿ.ಕೆ.ಭಟ್.
09-11-2020.