ಜೆಂಬ್ರದ ಗೌಜಿ
ಒಪ್ಪನ ಜಾಲಿಲಿ ಚಪ್ಪರ ಎದ್ದಿದು
ಇಪ್ಪದು ಮಗಳ ಮದುವೆಯಡ
ಕೊಪ್ಪರಿಗೆ ಅಶನವ ಬೇಶುಲಿದ್ದಡ
ತಪ್ಪುಸುಲೆಡಿಯಡ ಹೇಳಿದ್ದ°..||೧||
ಮೇಲಾರಕ್ಕೊರವಲೆ ಜನ ನೂರಕ್ಕು
ಬಲರಾಮಣ್ಣನ ಅಡಿಗೆಯಡ
ಕೆಲಸಲ್ಲಿಪ್ಪ ಭರ್ಜರಿ ಕುಳವಡ
ಕೆಲವರುಷಂದಲೆ ಪೇಟೆಲಿದ್ದದಡ...||೨||
ಸುದರಿಕೆ ಮಾಡುವ ನೆಂಟ್ರೇಯಿಲ್ಲೆ
ಬದಲಿಂಗೆ ಶಂಭಣ್ಣನ ಟೀಮಿದ್ದು
ವಿಧವಿಧ ಪಾಕವ ಪ್ರೀತಿಲಿ ಬಳುಸಿ
ಒದಗುವ ಜನ ಅವ ಮೋಸಯಿಲ್ಲೆ....||೩||
ಅಬ್ಬರಲಿತ್ತದ ವಾಲಗಸೆಟ್ಟು
ದಿಬ್ಬಣಬಪ್ಪಗ ಮಂಗಳವಾದ್ಯ
ಒಬ್ಬನ ಮಾತುದೆ ಕೇಳಲೆ ಕೇಳ
ಬೊಬ್ಬೆಹೊಡದು ಹರ್ದೋತುಗೆಂಟ್ಲು...||೪||
ಕೂಸೂಮಾಣಿಯು ಒಳ್ಳೆಯ ಜೋಡಿ
ಲೇಸಾದ ಕೂಟವ ಒಪ್ಪನೆ ನೋಡಿ
ಒಸಗೆಗೂ ಮೊದಲೇ ಬಫೆಗೆ ನಿಂದವು
ಕಸವುಡುಗುವ ಮೊದಲೇ ಹಂತಿಗೆಸಾಲು...||೫||
ತಡವಲೆಡಿಯದ್ದ ಸೆಕೆಯಿದ್ದಪ್ಪಾ
ಉಂಡಪ್ಪಗ ಮೈ ಚೆಂಡ್ಯಾವುತ್ತು
ಕಂಡಾಬಟ್ಟೆ ಬಗೆಯ ಹೊಸ ಪಾಕಂಗ
ಬಿಡ್ಲೆ ಮನಸಾಗದ್ದ ರುಚಿಯಡಿಗೆ..||೬||
ಇಂದಿರುಳಿಂಗೆ ತ್ರಿಕಾಲ ಪೂಜೆ
ನಾಂದೀಯಿದ್ದಡ ನಾಳೆ ಶಂಭುವಲ್ಲಿ
ಚೆಂದಲ್ಲಿ ಹೆರಟು ಹೋಪದೆ ಕೆಲಸ
ಬಂಧುಗಳ ಗಳಸಿರೆ ಸಂಬಂಧ ಒಳಿಗು..||೭||
ಹಳೆಹೊಸ ಕ್ರಮದ ಹೂರಣಬೇಕು
ಕಳವಲೆ ಸುಖಸಂತೋಷದ ಬದುಕು
ಬಳುವಳಿಯಾದ ಸಂಸ್ಕಾರವ ಒಳಿಶಿ
ಕಳಕಳಿಲಿ ಜೆಂಬ್ರವ ಗೌಜಿಲಿ ನಡೆಶಿ...||೮||
✍️... ಅನಿತಾ ಜಿ.ಕೆ.ಭಟ್.,ಮಂಗಳೂರು.
27-04-2020.
ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ ಆಯೋಜಿಸಿದ ವಿಷು ವಿಶೇಷ ಕವನ ಸ್ಪರ್ಧೆಗಾಗಿ ಬರೆದ ಕವನ.
ದತ್ತ ವಿಷಯ:- ಜೆಂಬ್ರದ ಗೌಜಿ.
ಚಿತ್ರ ಕೃಪೆ:- ಅಂತರ್ಜಾಲ
Laïka aydu kavana 👌👌
ReplyDeleteಧನ್ಯವಾದ.🙏💐
Deleteಸೂಪರ್ ಅಕ್ಕ..
ReplyDeleteಧನ್ಯವಾದಂಗ..
Delete