#ವರದಕ್ಷಿಣೆ
ಲಾಭವ ಲೆಕ್ಕಿಸಿ ವಿವಾಹ
ನಡೆವುದು ವರದಕ್ಷಿಣೆಯ ಪಿಡುಗಿನಲಿ
ಬಂದುದ ಎದುರಿಸಿ ಬದುಕುವರು
ಬರೆದುದು ಇಷ್ಟೇ ಹಣೆಯಲ್ಲಿ..
ನಲ್ನುಡಿ ಬಿರುನುಡಿ ಕೆಡುನುಡಿ
ಸರಿಸಮ ಬಾಳಿನ ತಕ್ಕಡಿಗೆ
ಇರುಳಿನ ತಂಪೂ ಹಗಲಿನ ಶಾಖವೂ
ಭೇದವಿರದು ಕ್ರೂರತೆಗೆ..
ಸಿರಿಯ ಮೋಹದಲಿ ಮೈಮರೆತು
ಸಂಸ್ಕೃತಿ ವಿಕೃತಿಯಾಗುತಿದೆ
ಬಣ್ಣದ ಮುಸುಕನು ಹೊದ್ದು
ದಾಂಪತ್ಯವು ಒಳಗೆ ನಲುಗುತಿದೆ..
ಬಂಧನ ಛೇದನ ಮಾಡುತ
ನಡೆದರೆ ದಾರಿಯು ಬಲುಕಷ್ಟ
ಹಠಸಾಧನೆಯೇ ಆದ್ಯತೆಯಾದರೆ
ಹೃದಯಗಳೆರಡಕೂ ನಷ್ಟ...
✍️.. ಅನಿತಾ ಜಿ.ಕೆ.ಭಟ್.
26-02-2021.
ಸವಾಲು# ಆದಿ-ಅಂತ್ಯ ವಿರೋಧ ಪದ
ಚಿತ್ರ ಕೃಪೆ:- ಅಂತರ್ಜಾಲ