#ಮತ್ತೆ ಹುಟ್ಟಿ ಬಾ...
(ನುಡಿನಮನ)
ಕನ್ನಡಿಗರ ಹೆಮ್ಮೆಯ
ಚಿತ್ರ ಕಲಾವಿದ
ತೊರೆದು ನಡೆದೆಯಲ್ಲ
ಈ ಮಣ್ಣಿನ ಬಂಧ||
ಮೊಗದಿ ನಗುವ ಚೆಲ್ಲುವ
ಹೃದಯವಂತ ಪುನೀತ
ಅವಸರದಲಿ ಕರೆಸಿಕೊಂಡ
ನೀನೆ ಎಂದು ಲೋಹಿತ||
ಬಾಡಿಮಸಣ ಸೇರಿತೇಕೆ
ಬೇಗ ಬೆಟ್ಟದ ಹೂವು
ಸಹಿಸಲೆಂತು ಭರಿಸಲೆಂತು
ನೀನಗಲಿದ ನೋವು||
ಆಡಿದನುಡಿ ಅಭಿನಯದ
ಸವಿನೆನಪೇ ಶಾಶ್ವತ
ತುಂಬುಬಾಳ ನಡೆಸೆ ಬಾ
ಕರುನಾಡಲ್ಲಿ ಮತ್ತೆ ಹುಟ್ಟುತ||
✍️... ಅನಿತಾ ಜಿ.ಕೆ.ಭಟ್.
29-10-2021.
No comments:
Post a Comment