#ಮಂಗಳಗೌರಿಯೇ ಕಾಯೇ
ಶರಣು ಶರಣೆಂಬೆನು ತಾಯೇ
ತರಳೆಯ ಮಂಗಳಗೌರಿಯೇ ಕಾಯೇ
ಹರಳಿನ ಓಲೆಯ ಕೊಡುವೆ
ಕೊರಳಸೌಭಾಗ್ಯವ ಹರಸಮ್ಮಾ
ತಾಯೇ||೧||
ಮಾಗಿದ ಫಲಪುಷ್ಪ ನಿನಗರ್ಪಿಸುತ
ಬಾಗುವೆ ಸುಮತಿಯ ಬೇಡುತಲಿ
ಬಾಗಿನದೊಳು ಮಂಗಳದ್ರವ್ಯಗಳ-
ನಿರಿಸುವೆ
ಭೋಗಚಿಂತನೆಯ ಕಳೆಯಮ್ಮ
ಹರಸುತಲಿ||೨||
ಒಳಿತನು ಸೆಳೆಯುವ ಬಳೆಗಳ ತೊಡಿಸು
ತಿಲಕದಿ ಒಲವಿನ ಚಿಲುಮೆಯ ಬೆರೆಸು
ಮಾಲೆಮಾಂಗಲ್ಯದೊಳು ನಲಿವನು
ಉಣಿಸು
ಮೂಗುತಿ ಗರತಿಯ ಸದ್ಗುಣದಿ
ನಡೆಸು||೩||
ಮುಡಿಗೆ ಸೌಗಂಧದ ಸುಮವನು
ಮುಡಿಸು
ಕಾಲುಂಗುರದಲಿ ಸಹನೆಯ ನಿಲಿಸು
ಮಧುರತೈಲವನೆರೆದು ಅಸುರಿಯ
ಮಣಿಸಿ
ಹೃದಯದಿ ಪ್ರೇಮದ ಹಣತೆಯ
ಬೆಳಗಿಸು||೪||
✍️... ಅನಿತಾ ಜಿ.ಕೆ.ಭಟ್.
25-08-2021.
No comments:
Post a Comment