ಹೊರಟೆಯೇಕೆ ನೇಸರ
ಕೈಯ ತೊಳೆದು ಕಡಲಲಿ
ಗೀಚಿ ಹೋದೆ ಸುಂದರ
ವರ್ಣ ಚಿತ್ರವ ಅಲೆಯಲಿ...
ಬಾನಿನಂಗಳ ಬಂಗಾರದ
ಪರದೆಯಾಗಿಸಿ ಅಂಚಲಿ
ಜಲಧಿ ತಾ ಹಿಡಿದು ನಿಂತಿದೆ
ನಿನ್ನ ಕಿರಣಕೆ ಅಂಜಲಿ....
ಯೋಗಿಮಾನವ ತನ್ನ ದೇಹವ
ಊರಿ ತೀರದಿ ಕರದಲಿ
ಭೋಗಿಯಾಗಿಹ ಭೂರಿಯುಂಡಿಹ
ನೆರಳು ಬಿಡದೆ ಜೊತೆಯಲಿ...
ಹೊಸದು ಅಲೆಯೂ ಎದ್ದು ಬರುತಿದೆ
ಹೊತ್ತು ಜೊಳ್ಳನು ತನ್ನಲಿ
ಹಳೆಯ ಕೊಬ್ಬನು ಕಳೆಯಬೇಕಿದೆ
ಮತ್ತೆ ಬಾಳಲು ಸುಖದಲಿ...
ಕ್ಷಣದಿ ರವಿಯು ನಿದಿರೆಗೈಯುವ
ಪಡುಗಡಲ ಕೊನೆಯಲಿ
ಕತ್ತಲಲ್ಲೂ ಬಾಳಬೇಕು ನವ
ಭರವಸೆಯ ಬೆಳಕಲಿ...
✍️... ಅನಿತಾ ಜಿ.ಕೆ.ಭಟ್.
15-12-2019.
ನೇಸರನ ವರ್ಣನೆ ಚೆನ್ನಾಗಿದೆ
ReplyDeleteThank you..
ReplyDeleteThumba chennagide
ReplyDeleteಥ್ಯಾಂಕ್ಯೂ 💐🙏
Delete