Wednesday, 18 December 2019

ಹೊರಟೆಯೇಕೆ ನೇಸರ



 ಹೊರಟೆಯೇಕೆ ನೇಸರ
ಕೈಯ ತೊಳೆದು ಕಡಲಲಿ
ಗೀಚಿ ಹೋದೆ ಸುಂದರ
ವರ್ಣ ಚಿತ್ರವ ಅಲೆಯಲಿ...

ಬಾನಿನಂಗಳ ಬಂಗಾರದ
ಪರದೆಯಾಗಿಸಿ ಅಂಚಲಿ
ಜಲಧಿ ತಾ ಹಿಡಿದು ನಿಂತಿದೆ
ನಿನ್ನ ಕಿರಣಕೆ ಅಂಜಲಿ....

ಯೋಗಿಮಾನವ ತನ್ನ ದೇಹವ
ಊರಿ ತೀರದಿ ಕರದಲಿ
ಭೋಗಿಯಾಗಿಹ ಭೂರಿಯುಂಡಿಹ
ನೆರಳು ಬಿಡದೆ ಜೊತೆಯಲಿ...

ಹೊಸದು ಅಲೆಯೂ ಎದ್ದು ಬರುತಿದೆ
ಹೊತ್ತು ಜೊಳ್ಳನು ತನ್ನಲಿ
ಹಳೆಯ ಕೊಬ್ಬನು ಕಳೆಯಬೇಕಿದೆ
ಮತ್ತೆ ಬಾಳಲು ಸುಖದಲಿ...

ಕ್ಷಣದಿ ರವಿಯು ನಿದಿರೆಗೈಯುವ
ಪಡುಗಡಲ ಕೊನೆಯಲಿ
ಕತ್ತಲಲ್ಲೂ ಬಾಳಬೇಕು ನವ
ಭರವಸೆಯ ಬೆಳಕಲಿ...

✍️... ಅನಿತಾ ಜಿ.ಕೆ.ಭಟ್.
15-12-2019.

4 comments: