ಸಲಿಲ-ಸರಸ
ಬರಡಾದ ನೆಲಕಿಂದು
ನೀರಹನಿ ತಂಪುಣಿಸಿ
ಸೀರೆಹಸಿರನು ಉಡಿಸಿದೆ...|
ತರಳೆಯ ಮನವಿಂದು
ಗರಿಗೆದರಿ ಕುಣಿಯುತಿರೆ
ಕಾರಣವು ಪ್ರೇಮದ ವರ್ಷಧಾರೆ..||
ನೀರಹನಿ ತಂಪುಣಿಸಿ
ಸೀರೆಹಸಿರನು ಉಡಿಸಿದೆ...|
ತರಳೆಯ ಮನವಿಂದು
ಗರಿಗೆದರಿ ಕುಣಿಯುತಿರೆ
ಕಾರಣವು ಪ್ರೇಮದ ವರ್ಷಧಾರೆ..||
ಬಾಯ್ದೆರೆದು ಬೀಜವದು
ಕಾಯ್ದು ಎಳೆ ಚಿಗುರನು
ತೊಯ್ದು ತಾ ಗಿಡಮೂಡಿದೆ..|
ಆಯ್ದು ತುಂತುರು ಹನಿಯ
ನೇಯ್ದು ಹೃದಯದ ಗೂಡಲಿ
ಕಾಯ್ದಿಹಳು ಇನಿಯನ ಕಣ್ಣಂಚಲಿ..||
ಕಾಯ್ದು ಎಳೆ ಚಿಗುರನು
ತೊಯ್ದು ತಾ ಗಿಡಮೂಡಿದೆ..|
ಆಯ್ದು ತುಂತುರು ಹನಿಯ
ನೇಯ್ದು ಹೃದಯದ ಗೂಡಲಿ
ಕಾಯ್ದಿಹಳು ಇನಿಯನ ಕಣ್ಣಂಚಲಿ..||
ನಾಲಿಗೆಯ ಹೊರಚಾಚಿ
ಉಲಿಯುತಲಿ ನಲಿಯುತಲಿ
ಸಲಿಲದೊಡಗೂಡಿ ಸರಸವಾಡಿ ..|
ಕಲಿಸಿಹಳು ತನ್ನವಗೆ ಜಿನುಗುವ
ಮಳೆಹನಿಯ ಹೀರಿ ಹಿಗ್ಗಲು
ಕಾಲಕಾಲದ ಸೊಬಗು ಸವಿಯಲು..||
ಉಲಿಯುತಲಿ ನಲಿಯುತಲಿ
ಸಲಿಲದೊಡಗೂಡಿ ಸರಸವಾಡಿ ..|
ಕಲಿಸಿಹಳು ತನ್ನವಗೆ ಜಿನುಗುವ
ಮಳೆಹನಿಯ ಹೀರಿ ಹಿಗ್ಗಲು
ಕಾಲಕಾಲದ ಸೊಬಗು ಸವಿಯಲು..||
ಖಗಮೃಗವು ಗಿಡಮರವು
ಆಗಿಹುದು ಬೆದರಿ ಒದ್ದೆ ಮುದ್ದೆ
ಕೂಗುತಿದೆ ತೊರೆ ನೊರೆಯುತ..|
ಆಗಸದಿ ಕೋಲ್ಮಿಂಚು; ಸುಳಿಮಿಂಚು
ಆಗಮನ ಇನಿಯನ ರಸನೋಟಕೆ
ಬೀಗುವಳು ಬೆಚ್ಚನೆಯ ಬಂಧನದಲಿ..||
ಆಗಿಹುದು ಬೆದರಿ ಒದ್ದೆ ಮುದ್ದೆ
ಕೂಗುತಿದೆ ತೊರೆ ನೊರೆಯುತ..|
ಆಗಸದಿ ಕೋಲ್ಮಿಂಚು; ಸುಳಿಮಿಂಚು
ಆಗಮನ ಇನಿಯನ ರಸನೋಟಕೆ
ಬೀಗುವಳು ಬೆಚ್ಚನೆಯ ಬಂಧನದಲಿ..||
ಹದವಾಗಿ ಮಳೆಯಾಗಿ
ವಿಧವಿಧದ ಬೆಳೆಬೆಳೆದು
ಉದರಭರಿಸೆ ಫಸಲು ತೆನೆಗೂಡಲಿ..|
ಕಳೆಯಾಗಿ ಬಂದಿರುವ ಕೋವಿಡ್
ಕೊಳೆತೊಳೆದು; ಮನೆಮನವು
ಇಳೆಯಲಿ ಬೆಳಗಿ ಹರುಷಗೊಳಲಿ...||
ವಿಧವಿಧದ ಬೆಳೆಬೆಳೆದು
ಉದರಭರಿಸೆ ಫಸಲು ತೆನೆಗೂಡಲಿ..|
ಕಳೆಯಾಗಿ ಬಂದಿರುವ ಕೋವಿಡ್
ಕೊಳೆತೊಳೆದು; ಮನೆಮನವು
ಇಳೆಯಲಿ ಬೆಳಗಿ ಹರುಷಗೊಳಲಿ...||
✍️... ಅನಿತಾ ಜಿ.ಕೆ.ಭಟ್.
17-07-2020.
17-07-2020.
momspresso Kannada ದಲ್ಲಿ 'ಮಾನ್ಸೂನ್,ಹೆಣ್ಮಕ್ಕಳ ಸಂಭ್ರಮ' ವಿಷಯಕ್ಕಾಗಿ ಬರೆದ ಕವನ..
👌🏼👌🏼👏👏
ReplyDeleteಧನ್ಯವಾದಗಳು 💐🙏
Delete