Friday, 2 October 2020

ಅಂತರಂಗ

 


ಅಂತರಂಗ

ಎದೆಯ ಕದವ ತೆರೆದು ಬರೆಯೆ
ಮೂಡಿ ಕವನ ಚೆಂದನೆ
ಸಾಲು ಸಾಲಿನಲ್ಲಿ ಬೆರೆತು
ನಲಿದ ಮನದ ಚಿಂತನೆ||೧||

ವಿಷಯ ಹರವು ಸರಳ ಭಾವ
ಅರಳಿ ನಿಂತು ನಗುತಿದೆ
ವಿಮರ್ಶೆ ವಾದ ತಿರುಚಿನಿಂದ
ನರಳಿ ಸೊರಗಿ ಕೊರಗಿದೆ||೨||

ಹರಿವ ನೀರಿಗಾರು ದಾರಿ
ತೋರಿ ಶರಧಿ ಸೇರಿದೆ
ಕುದಿವಕುಲುಮೆ ನೋವಹಬೆಯು
ಬರಹಕಿಳಿದು ತಣಿದಿದೆ||೩||

ಮುದ್ದು ಮಗುವ ತೊದಲು
ಮಾತು ಚೆಂದವಲ್ಲವೇ..?
ಎದ್ದು ಬಿದ್ದು ನಡೆಯುವಾಗ
ಆಡಿ ನಗುವೆವೇ..?||೪||

ಮಗುವು ಬೀಳೆ ನಕ್ಕರವನು
ಸಹಜ ಗುಣದ ಮನುಜನೇ?
ಎಡವದಂಥ ದಾರಿಯದುವೆ
ಬರಿಯ ಮಿಥ್ಯ ಕಲ್ಪನೆ||೫||

ತಪ್ಪು ಎತ್ತಿ ಹಳಿಯುವಂಥ
ಲೇಖನಿಯು ಬರೆಯಲಾರದೇ..?
ಒಪ್ಪುವಂಥ ಸಾಲು ಬರೆದು
ನಿತ್ಯ ಮೆರೆಯಬಾರದೇ..?||೬||

ಬರೆವ ಶೈಲಿ ಯೋಚನೆಯಲಿ
ಇಹುದು ವ್ಯಕ್ತಿ ವ್ಯಕ್ತಿಗೆ ಭಿನ್ನತೆ
ತಿರುಚಿ ಕೆಡಿಸ ಹೊರಟವರಿಗೆ
ಕೊಡುವುದೆನಿತು ಮಾನ್ಯತೆ..????||೭||

✍️..ಅನಿತಾ ಜಿ.ಕೆ.ಭಟ್.
02-10-2020.


8 comments:

  1. ಅರ್ಥಪೂರ್ಣವಾಗಿದೆ ✍👌

    ReplyDelete
  2. ಮನ ಮುಟ್ಟುವ ಕವನ... ತುಂಬಾ ಚೆನ್ನಾಗಿದೆ...

    ReplyDelete
  3. ತುಂಬಾ ಚೆನ್ನಾಗಿದೆ..👌❤

    ReplyDelete
  4. ತಂಬಾಕು ಚೆನ್ನಾಗಿದೆ👌❤

    ReplyDelete