Sunday, 26 January 2020

ನಮ್ಮಯ ಶಾಲೆಯ ಗಣರಾಜ್ಯೋತ್ಸವ


ಸಂಭ್ರಮದ ಗಣರಾಜ್ಯೋತ್ಸವ
ಚಿಣ್ಣರಿಗಿಂದು ಹಬ್ಬ
ಧ್ವಜಾರೋಹಣ ಗೈದವರು
ಊರಿನ ಹಿರಿಯ ಸುಬ್ಬ||

ಸುದೀರ್ಘ ಸಂವಿಧಾನ
ಭಾರತಕೆ ಮುಕುಟ
ನಾಟಕ ಸಾರಿದೆ ಸನಾತನ
ಸಂಸ್ಕ್ರೃತಿಯ ಕಿರೀಟ||

ಜಾತ್ಯಾತೀತತೆ ಪ್ರಜಾಪ್ರಭುತ್ವ
ಐಕ್ಯತೆಗೆ ನಾವು ಬದ್ಧ
ಸಂವಿಧಾನದ ಮಹತಿಯ
ಭಾಷಣಗೈದಿಹ ಸಿದ್ಧ||

ಗುರುಗಳಿಂದ ದೇಶಕಾಗಿ
ಹೋರಾಡಿದ ಗಣ್ಯರ ಗುಣಗಾನ
ಗಡಿಕಾಯುವ ಯೋಧರಿಗೆ
ನಮಿಸುವ ಸುದಿನ||

ಭಾರತೀಯರೆಲ್ಲ ಸಮಷ್ಟಿ
ಒಕ್ಕೊರಲಿನಲಿ ಹಾಡಿ
ನೆಲದಲಿ ನಮ್ಮಯ ಪುಣ್ಯಸೃಷ್ಟಿ
ಬಾಗುವೆವವಳ ಪಾದದಡಿ||

ಚಿಣ್ಣರಿಗೆಲ್ಲ ಸಿಹಿ ಹಂಚಿ
ದೇಶಭಕ್ತಿಯ ಮೂಡಿಸುತ
ಬಾಲರಲಿ ತುಂಬಿಕೊಂಡಿತು
ಕಣಕಣದಲ್ಲೂ ಭಾರತೀಯತೆ||


✍️... ಅನಿತಾ ಜಿ.ಕೆ.ಭಟ್.
26-01-2020.

2 comments: