Thursday, 2 January 2020

ಪಯಣ





ಆದಿ ಅಂತ್ಯದ ನಡುವೆ
ಸಾಗುತಿದೆ ಪಯಣ
ಅಂಧಕಾರವ ಕಳೆದು
ರವಿ ಉದಿಸಿದ ಮೂಡಣ..||

ಮೇಲೆ ಸಾಗುವ ಮಾರ್ಗ
ವಾಹನ ರೈಲಲಿ ತುಂಬಿ ಜನವರ್ಗ
ಬೆಸೆದಿದೆ ಗಟ್ಟಿ ಗೆಳೆತನ
ನನಸಾಗಿಸಿದೆ ಜನರ ಕನಸಿನ..||

ಆಶಾಗೋಪುರ ಕಟ್ಟಿ ದಾರಿದೀಪವಾಗಿದೆ
ದೀಪದಡಿ ಕತ್ತಲು ಮತ್ತೆ ಸಾಬೀತಾಗಿದೆ
ನೋವಿನಲು ನಲಿವಿನಲು ಜತೆ ನಡೆಯೆ ಗೆಳತಿ
ಹೆದರದೆ ಮುಂದಡಿಯಿಡಲು ಸುರಂಗದೊಳವಳೆ ಶಕುತಿ ..||

ಕತ್ತಲು ಬೆಳಕಿನ ಜೀವನ ಜಂಜಾಟ
ಒಮ್ಮೆ ಸುಂದರ ನೋಟ; ಮರುಕ್ಷಣ ತೊಳಲಾಟ
ಚಂದಿರನ ತಂಪೀಗ ಅನುಭವ
ಕಾದಿಹುದು ರವಿಯ ಪ್ರಖರ ಪ್ರಭಾವ..||

ಇಂದು ಕಂಡ ಕನಸ ಬತ್ತಿ
ನಾಳೆ ಉರಿಯಲೂ ಬಹುದು ಹೊತ್ತಿ
ದಾಟಬಹುದು ಸುಲಭದಲಿ ಸುರಂಗ
ಕಳೆಯಬಹುದೇ ಹಣ್ಣೆಲೆಯಂತೆ ಭವದ ಸಂಗ..||
                            👭
✍️... ಅನಿತಾ ಜಿ.ಕೆ.ಭಟ್.
02-01-2020.
ಚಿತ್ರ:-ಹವಿಸವಿ ಕೃಪೆ

3 comments:

  1. ನಿಜ.. ಜೀವನವೇ ಒಂದು ಪಯಣ ,👌🏻👌🏻

    ReplyDelete
  2. ಧನ್ಯವಾದಗಳು 💐

    ReplyDelete