ಸರ್ವರಿಗೂ ಶ್ರೀ ರಾಮನವಮಿಯ ಶುಭಾಶಯಗಳು 💐
ಗಜಲ್
ಮನದೊಳಗೆ ಮನೆಮಾಡು ಮನೋಹಾರಿ ರಾಮ
ಒಳಗಿಳಿದು ಕೊಳೆತೊಳೆದು ಬೆಳಗೆನ್ನ ರಾಮ||
ಅಡಿಗಡಿಗೆ ಎಡವುತಲಿ ನಡೆಯುವೆನು ನಾನು
ಅಡೆತಡೆಯ ಸರಿಸಿ ಆವರಿಸೆನ್ನ ರಾಮ||
ಮತ್ಸರವು ತುಂಬಿರುವ ಜಗದೊಳಗೆ ಇಂದು
ಮನಶ್ಶಾಂತಿ ಸುಧೆಯೆನಗೆ ಹರಿಸೆನ್ನ ರಾಮ||
ಅರಿಯನ್ನು ಪರಿಹರಿಸಿ ಕರಪಿಡಿದು ನಿಲಿಸು
ಅರಿಕೆಯಿದು ಹರಕೆಯಿದು ಕನಿಕರಿಸೆನ್ನ ರಾಮ||
ಚರಾಚರದೊಳು ಚಂಚಲಿತ ಚಿತ್ತವಿಹುದಿಲ್ಲಿ
ಚಂದಿರನ ತಂಪಿನೊಳು ನಡೆಸೆನ್ನ ರಾಮ||
ಬಿಸಿಯುಸಿರ ಬೇಗೆಯಲಿ ಬೆಂದಿರುವೆ ನಾನು
ಬಿಡೆನಿನ್ನ ಚರಣವನು ಹರಸೆನ್ನ ರಾಮ||
ಇರುಳಲ್ಲಿ ಹೊರಳಿ ನರಳಿರುವೆ ನಾನು
ಕರುಣಾಳು ಕರೆಕೇಳಿ ಸಲಹೆನ್ನ ರಾಮ||
ಮೊರೆಯಿಡುವ ಮುಗುಧರ ಬಿನ್ನಹವ ಕೇಳಿ
ಮರೆಯದೆ ಮಧುತುಂಬಿ ಮಾರ್ದನಿಸೆನ್ನ ರಾಮ||
ಅಕ್ಷಿಯೊಳು ನಿನ ಬಿಂಬ ತುಂಬಿಹುದು ರಾಮ
ಅಂತರಾತ್ಮದಿ ನೆಲೆಸಿ ಅನುಗ್ರಹಿಸೆನ್ನ ರಾಮ||
✍️... ಅನಿತಾ ಜಿ.ಕೆ.ಭಟ್.
02-04-2020.
ಗಜಲ್
ಮನದೊಳಗೆ ಮನೆಮಾಡು ಮನೋಹಾರಿ ರಾಮ
ಒಳಗಿಳಿದು ಕೊಳೆತೊಳೆದು ಬೆಳಗೆನ್ನ ರಾಮ||
ಅಡಿಗಡಿಗೆ ಎಡವುತಲಿ ನಡೆಯುವೆನು ನಾನು
ಅಡೆತಡೆಯ ಸರಿಸಿ ಆವರಿಸೆನ್ನ ರಾಮ||
ಮತ್ಸರವು ತುಂಬಿರುವ ಜಗದೊಳಗೆ ಇಂದು
ಮನಶ್ಶಾಂತಿ ಸುಧೆಯೆನಗೆ ಹರಿಸೆನ್ನ ರಾಮ||
ಅರಿಯನ್ನು ಪರಿಹರಿಸಿ ಕರಪಿಡಿದು ನಿಲಿಸು
ಅರಿಕೆಯಿದು ಹರಕೆಯಿದು ಕನಿಕರಿಸೆನ್ನ ರಾಮ||
ಚರಾಚರದೊಳು ಚಂಚಲಿತ ಚಿತ್ತವಿಹುದಿಲ್ಲಿ
ಚಂದಿರನ ತಂಪಿನೊಳು ನಡೆಸೆನ್ನ ರಾಮ||
ಬಿಸಿಯುಸಿರ ಬೇಗೆಯಲಿ ಬೆಂದಿರುವೆ ನಾನು
ಬಿಡೆನಿನ್ನ ಚರಣವನು ಹರಸೆನ್ನ ರಾಮ||
ಇರುಳಲ್ಲಿ ಹೊರಳಿ ನರಳಿರುವೆ ನಾನು
ಕರುಣಾಳು ಕರೆಕೇಳಿ ಸಲಹೆನ್ನ ರಾಮ||
ಮೊರೆಯಿಡುವ ಮುಗುಧರ ಬಿನ್ನಹವ ಕೇಳಿ
ಮರೆಯದೆ ಮಧುತುಂಬಿ ಮಾರ್ದನಿಸೆನ್ನ ರಾಮ||
ಅಕ್ಷಿಯೊಳು ನಿನ ಬಿಂಬ ತುಂಬಿಹುದು ರಾಮ
ಅಂತರಾತ್ಮದಿ ನೆಲೆಸಿ ಅನುಗ್ರಹಿಸೆನ್ನ ರಾಮ||
✍️... ಅನಿತಾ ಜಿ.ಕೆ.ಭಟ್.
02-04-2020.
Haadu bhahala chennagide
ReplyDeleteಧನ್ಯವಾದಗಳು 💐🙏
ReplyDelete