ಕೊರೋನಾ ಇಷ್ಟೊಂದು ಬದಲಾವಣೆಯನ್ನು ತಂದಿದೇನಾ..?🤔🤔
ಕೊರೊನಾ ಕೋವಿಡ್ ಇಡೀ ಜಗತ್ತನ್ನೇ ನುಂಗುವಂತೆ ಅಟ್ಟಹಾಸಗೈಯುತ್ತಿದೆ. ಭಯದಿಂದ ನಡುಗುತ್ತಿರುವಾಗ ನಗುವುದು ಕಷ್ಟ.ಆದರೂ ದೈನಂದಿನ ಬದುಕಿನಲ್ಲಿ ಬರುವ ಚಿಕ್ಕಪುಟ್ಟ ಸನ್ನಿವೇಶಗಳನ್ನು ನೆನೆಸಿಕೊಂಡು ಹೊಟ್ಟೆಹುಣ್ಣಾಗುವಂತೆ ನಗುವುದಕ್ಕೆ ಯಾವುದೇ ಅಡೆತಡೆಯಿಲ್ಲ.ನಕ್ಕುನಕ್ಕು ರೋಗನಿರೋಧಕ ಶಕ್ತಿಯನ್ನು ವೃದ್ಧಿಸಿಕೊಳ್ಳುತ್ತಾ ಕೊರೊನಾ ಮಾರಿಯನ್ನು ಗೆಲ್ಲೋಣ.ಎಪ್ರಿಲ್ 1 ಹಾಸ್ಯಕ್ಕೆ ವಿಶೇಷ ತಾನೇ..?
ಸಂಗೀತ ಚಂದನ್ ನಂದನ್ ನನ್ನು ಓದಿಸುತ್ತಿದ್ದಾಳೆ.. ನಾಳೆ ಪರೀಕ್ಷೆಗೆ ರೆಡಿ ಆಗಬೇಕೆಂಬ ತರಾತುರಿ.. ಅಷ್ಟರಲ್ಲೇ ಮೊಬೈಲ್ ಟಿಣ್ ಎಂದಿತ್ತು. ಪರೀಕ್ಷೆ ಕ್ಯಾನ್ಸಲ್ ಮಾಡಲಾಗಿದೆ ಎಂಬ ಸುದ್ದಿ ಹೊತ್ತು ತಂದಿತು..ಆಹಾ..!! ಸಿಹಿಸುದ್ದಿ ಎಂದು ಕುಣಿದಾಡಿದ ನಂದನ್. 🤺🤸🤹ಚಂದನ್ ಗೆ ಮಾತ್ರ ಪರೀಕ್ಷೆ..ಹಾಗಾಗಿ ಇನ್ನು ದಿನವಿಡಿ ಅಮ್ಮನ ಮೊಬೈಲ್ ನನಗೆ ಎಂದು ಕುಣಿದಾಡಿ ಪುಸ್ತಕವನ್ನೆಲ್ಲ ಬದಿಗಿರಿಸಿ...ಬೀಗಿದ ನಂದನ್.🕺 ಚಂದನ್ ಪೆಚ್ಚು ಮುಖ ಹಾಕಿಕೊಂಡು ಕುಳಿತ. ಸಂಗೀತಾಳ ಓದು ಓದು ಎಂಬ ರಾಗ ಈಗ ಚಂದನ್ ಕಡೆಗೆ. ಕೊನೆಗೆ ಅವನ ಪರೀಕ್ಷೆಯೂ ಮುಂದೆ ಹೋಯ್ತಾ... ಈಗ ಅಪ್ಪನನ್ನು ಕೇಳುವುದೇ ಕೆಲಸ ಇಬ್ಬರಿಗೂ "ನಿಮಗೂ ರಜ ಇಲ್ವಾ.. ..?"
"ಇಲ್ಲ ಪುಟ್ಟ ..ಕಾಲೇಜು ಮಕ್ಕಳಿಗೆ ಮಾತ್ರ ರಜೆ."ಎಂದು ವಿವರಿಸಿದರು ಮಧುಕರ್..
"ಹಾಗಾದರೆ ನೀವು ಯಾರಿಗೆ ಪಾಠ ಮಾಡುವುದು ..? ಬೆಂಚ್ ಡೆಸ್ಕ್ ಗಾ..? ನಿಮಗೆಲ್ಲ ಕೊರೋನಾ ಏನೂ ಮಾಡಲ್ವಾ..?"😀😀
ನಗು ತಡೆಯಲಾಗಲಿಲ್ಲ ಅಪ್ಪ ಮಧುಕರ ನಿಗೆ.ಅಂತೂ ಕೆಲವು ದಿನದಲ್ಲಿ ಅಪ್ಪನಿಗೂ ರಜೆ ಸಿಕ್ಕಾಗ ಇಬ್ಬರು ಕುಣಿದಾಡಿದರು.. ಅಪ್ಪನ ಮೊಬೈಲ್ ನಂದನ್ ಗೆ. ಅಮ್ಮನ ಮೊಬೈಲ್ ಚಂದನ್ ಗೆ. ಇಬ್ಬರೂ ಆಡಿದ್ದೇ ಆಡಿದ್ದು. ಕೊನೆಗೆ ನೆಟ್ವರ್ಕ್ ಸಿಗದಿದ್ದಾಗ .. ಡಿಶುಂ ಡಿಶುಂ..🤜🤛🤼🤼 ಶುರುವಾಗಿತ್ತು...
ಕೊರೋನಾ ಲಾಕ್ಡೌನ್ ನಿಂದಾಗಿ ಸಾಮಗ್ರಿಗಳು ಹಾಲು ಸಿಗುವುದು ಸ್ವಲ್ಪ ಕಷ್ಟ.ಮಧುಕರ್ ಬೆಳಗ್ಗೆ ಹಾಲಿಗೆ ಹೋಗಿ ಬರಿಗೈಯಿಂದ ಹಿಂದಿರುಗಿದರು.. "ಅಲ್ಲಿ ಹಾಲು ಸಿಗಲಿಲ್ಲ "ಎನ್ನುವ ಮಾತು ತುಂಟ ಮಕ್ಕಳಿಗೆ ಕಿವಿಗೂ ಬಿದ್ದಿತು.🧒👦ಮಕ್ಕಳಿಗೆ ದಿನಕ್ಕೆರಡು ಲೋಟ ಹಾಲು ಕುಡಿಸಲು ಹರಸಾಹಸ ಪಡುತ್ತಿದ್ದಳು ಸಂಗೀತಾ.ಬೆಳಗ್ಗೆ ಕಷಾಯ ಮಾಡಿಕೊಟ್ಟರೆ ಮುಖ ಸಿಂಡರಿಸಿ ಇದು ಮೆಚ್ಚುವುದಿಲ್ಲ.. ಕೊತ್ತಂಬರಿ ಜೀರಿಗೆ ವಾಸನೆ ಬರುತ್ತೆ... ಅನ್ನುತ್ತಿದ್ದ ನಂದನ್ ಮೂರು ಬಾರಿ ಇನ್ನೂ ಬೇಕು.. ಇನ್ನೂ ಬೇಕು.. ಎಷ್ಟು ರುಚಿ ಕಷಾಯ ಎನ್ನುತ್ತಾ ಹಾಕಿಸಿಕೊಂಡು ಕುಡಿದ.. ಚಂದನ್ ಕೂಡಾ ಅಷ್ಟೇ 10 ಗಂಟೆಗೆ ಹಾಲಿನೊಂದಿಗೆ ತನಗೆ ಸಪ್ಪೆ ಮಾರಿ ಬಿಸ್ಕಿಟ್ ಮೆಚ್ಚುವುದಿಲ್ಲ ಎನ್ನುತ್ತಿದ್ದವ ಅರ್ಧ ಮಾರಿ ಬಿಸ್ಕೆಟ್ ಪ್ಯಾಕೆಟ್ ಹೊಟ್ಟೆಗಿಳಿಸಿದ. ಸಂಗೀತ ಕೊರೋನಾ ಮಕ್ಕಳಿಗೆ ಹಾಲಿನ ರುಚಿ ಕಲಿಸಿಬಿಟ್ಟಿತು ಎಂದುಕೊಂಡಳು.😘😘
ದೋಸೆಯ ಮೇಲೆ ಸಕ್ಕರೆ, ಇಡ್ಲಿಗೆ ಸಕ್ಕರೆ, ಕೊನೆಗೆ ಊಟಕ್ಕೂ ಸಕ್ಕರೆ ಬೇಕೆಂದು ಹಠ ಹಿಡಿದ ನಂದನನಿಗೆ "ನೋಡು ಇಷ್ಟೇ ಇರೋದು. ಸಕ್ಕರೆ 21ಕ್ಕೆ ಆಗಬೇಕು" ಎಂದು ಎಚ್ಚರಿಸಿದರು..ಸಂಗೀತಾ.ಆಗಾಗ ಬೀಳುವ ಮಾವಿನ ಹಣ್ಣನ್ನು ತಂದು ಜ್ಯೂಸ್ ಮಾಡುವ, ಹಣ್ಣಾದ ಚಿಕ್ಕು,ಪೆರಳೆ ಕಂಡರೆ ಮಿಲ್ಕ್ ಶೇಕ್ ಮಾಡುವ ಅನ್ನುತ್ತಿದ್ದ ಚಂದನ್ ಗೆ ಸಂಗೀತ "ಮಾವಿನ ಹಣ್ಣನ್ನು ಹಾಗೆ ಕಚ್ಚಿ ತಿನ್ನು ..ಇಲ್ಲದಿದ್ದರೆ ಸಾರು ಮಾಡೋಣ ..ಚಿಕ್ಕು,ಪೇರಳೆ ಹಾಗೆ ತಿಂದರೆ ಆರೋಗ್ಯಕ್ಕೆ ಒಳ್ಳೆಯದು "ಎಂದು ಪುಸಲಾಯಿಸಿ ಒಪ್ಪಿಸಿದಳು.. 😜ಮಕ್ಕಳಿಗೆ ಏನೋ ಗುಮಾನಿ.. ಅಪ್ಪ ತಂದ ಸಕ್ಕರೆಯನ್ನು ಅಮ್ಮ ಎಲ್ಲೋ ಅಡಗಿಸಿಟ್ಟಿದ್ದಾರೆ ಎಂದು.. ಸಂಜೆ ದೊಡ್ಡದಾಗಿ ಇರುವೆಯಸಾಲು ಹೋಗುತ್ತಿದ್ದರೆ ..ಇರುವೆಯ ಸಾಲನ್ನು ಪುಟಾಣಿ ಪಂಟರು ಹಿಂಬಾಲಿಸಿದರು.🕵️🕵️ ಅಕ್ಕಿಯ ಗೋಣಿಯ ಹಿಂದೆ ತುಂಬಿಸಿಟ್ಟಿದ್ದ ಸಕ್ಕರೆ ಡಬ್ಬ ಕಂಡದ್ದೇ ತಡ... ಕಳ್ಳನನ್ನು ಹಿಡಿದ ಪೋಲೀಸರಂತೆ ಸಂಭ್ರಮಿಸಿದರು." ಅಮ್ಮ ಸುಳ್ಳು ಹೇಳಿದ್ದು !!"ಎಂಬ ಪದ್ಯವೇ ಮಕ್ಕಳ ಬಾಯಲ್ಲಿ ಐದು ನಿಮಿಷ..😳😳ಸಾಮಾನು ತಂದು ತಂದು ಎಲ್ಲ ಡಬ್ಬಗಳಲ್ಲಿ ತುಂಬಿ ಕೊನೆಗೆ ಸಕ್ಕರೆಗೆಂದು ಉಳಿದ ಡಬ್ಬದ ಮುಚ್ಚಲ ಬಿಗಿಯಿರಲಿಲ್ಲ.. ರಜೆಯಲ್ಲಿದ್ದ ಮಧುಕರನಿಗೆ ಸಕ್ಕರೆಯಿಂದ ಇರುವೆ ಓಡಿಸುವ ಕೆಲಸ..ಪಾಪ..!!😠😡
ಈಗ ಆಹಾರ ಸಿಗದಿರುವ ಪರಿಸ್ಥಿತಿ ದನಗಳಿಗೂ ಗೊತ್ತಾಗಿದೆ ನೋಡಿ..ಸಂಗೀತ ಒಣಗಲೆಂದು ಎತ್ತರವಾದ ಕಾಂಪೌಂಡ್ ಕಟ್ಟೆಯಲ್ಲಿ ಬೆಲ್ಲದ ತಟ್ಟೆಯನ್ನಿಟ್ಟರೆ ಆ ಬದಿಯಿಂದ ದನವೊಂದು ತನ್ನ ನಾಲಿಗೆಯನ್ನು ಒಂದಡಿ ಉದ್ದಮಾಡಿ ತಿನ್ನಲು ಹವಣಿಸುತ್ತಿತ್ತು.. ಇದಕ್ಕೂ ಮೊದಲು ಹಲವಾರು ಬಾರಿ ಬೆಲ್ಲವಿಟ್ಟಾಗ ತಿನ್ನದಿದ್ದ ದನದ ಮೂಗು ಇಂದು ಮಾತ್ರ ಪರಿಮಳದ ಜಾಡು ಹಿಡಿದಿತ್ತು..
ಚವಿಹಣ್ಣು /ಕಾಕಮಾಚಿ ಹಣ್ಣು ಇತ್ತೀಚೆಗೆ ಹಕ್ಕಿಗಳ ಪಾಲಾಗುತ್ತಿದ್ದುದೇ ಹೆಚ್ಚು..ಈಗ ಮಾತ್ರ ದಿನಕ್ಕೆ ಮೂರು ಬಾರಿ ಅದರ ಗೆಲ್ಲುಗಳನ್ನು ಸರಿಸಿ ಹಣ್ಣು ಹುಡುಕಿ ಖಾಲಿಮಾಡುವ ನಂದನ್.."ಹಕ್ಕಿಗಳಿಗೆ ಚೂರು ಉಳಿಸೋ ಮಗಾ" ಎಂದು ಅಮ್ಮ ಗೋಗರೆದರೆ "ಹೋಗಮ್ಮಾ..ಹಕ್ಕಿಗಳಿಗೆ ರೆಕ್ಕೆ ಬಡಿದು ಹಾರಿ ಊರಿಡೀ ಸುತ್ತಿ ಹಣ್ಣು ತಿನ್ನಬಹುದು..ನಮಗೆ..ಹಾರಾಕಾಗಲ್ಲ.. ಪೇಟೆಯಿಂದ ಹಣ್ಣು ತಂದರೆ ಕೊರೋನಾ ಭಯ" ಎನ್ನುತ್ತಾ ಮನೆಯ ಹಿಂದೆ ಇರುವ ಗಿಡದಿಂದ ಹಣ್ಣುಕೊಯ್ಯಲು ಓಡಿದ.. ನಂದನ್.
ಸಂಗೀತ ಮಕ್ಕಳಲ್ಲಿ ಒಮ್ಮೆ ಮೊಬೈಲ್ ಕೇಳಿ ತನ್ನ ಕಥೆಯನ್ನು ವಾಯ್ಸ್ ಟೈಪಿಂಗ್ ಮಾಡತೊಡಗಿದಳು."ಸೌಜನ್ಯ ಕೇಶವ ಬೆಂಗಳೂರಿಗೆ ತೆರಳಿದರು"ಎಂದು ಹೇಳುತ್ತಾ ಅಕ್ಷರಗಳಲ್ಲಿಯೇ ಗಮನವಿರಿಸಿದ್ದಳು..
."ಅಯ್ಯೋ ಅಮ್ಮಾ..ಬೆಂಗಳೂರಿಗೆ ಹೋಗ್ತಾರಂತಾ.ಬೇಡ ಅನ್ನು... ಅಲ್ಲಿ ಕೊರೋನ ಜಾಸ್ತಿ ಇದೆಯಂತ ನ್ಯೂಸಿನಲ್ಲಿ ಬಂದಿತ್ತು"😲😲
..ಅಂದ ನಂದನ್ ನ ಮಾತಿಗೆ ಸಂಗೀತ ಮಧು ಇಬ್ಬರೂ ನಕ್ಕು ಸುಸ್ತಾದರು..ಅವನಿಗೇನು ಗೊತ್ತು ಅದು ಕಥೆ ಕಾಲ್ಪನಿಕ ಎಂದು.. ಇನ್ನು ಗಂಡ ಮಕ್ಕಳು ಮಲಗಿದ ಮೇಲೆಯೇ ಟೈಪಿಂಗ್ ಎಂದು ಕೆಲಸದತ್ತ ಮುಖ ಮಾಡಿದಳು.
ಹೊರಗಿನಿಂದ "ಅಮ್ಮಾ...ಪಪ್ಪಾಯ ಹಣ್ಣಾಗಿದೆಯಾ ನೋಡು..." ಎಂಬ ದನಿಕೇಳಿ ಕಿಟಕಿಯಿಂದ ನೋಡಿದಾಗ ...ಸಂಗೀತಾ ಹೌಹಾರಿ ...ಕಿಲಾಡಿ ಮಕ್ಕಳನ್ನು ಸುಮ್ಮನೆ ಬಿಟ್ಟರೆ ಹೀಗೆ ಎಂದು ಹೊರಗೋಡಿದಾಗ ಕಂಪೌಂಡ್ ಹತ್ತಿ ಪಪ್ಪಾಯಿ ಕೊಯಿದು ಕೈಯಲ್ಲಿ ಹಿಡಿದು ನಗುತ್ತಿದ್ದ ನಂದನ್.. ಮೊದಲು ಕಾಗಕ್ಕ ಹಣ್ಣಾಗಿದೆಯಾ ಎಂದು ಟೆಸ್ಟ್ ಮಾಡಿ ಟೇಸ್ಟ್ ನೋಡಿ ತನ್ನ ಬಳಗವನ್ನು ಕರೆಯುವಾಗಲೇ ಸಂಗೀತಾಗೆ ತಿಳಿಯುತ್ತಿದ್ದುದು ..!! 😆ಈಗ ಪೂರ್ತಿ ಹಣ್ಣಾಗುವ ಮೊದಲೇ ಕೊಯ್ದು ಒಳಗಿಟ್ಟು ಆಗಾಗ ಹಣ್ಣಾಗಿದೆಯಾ ಪರೀಕ್ಷಿಸಿ ಹಣ್ಣಾದಾಗ ಮೆಟ್ಟುಕತ್ತಿಯನ್ನಿಟ್ಟು" ಅಮ್ಮಾ.. ನೀವು ಕೊರೆಯುತ್ತೀರೋ ನಾನೇ ಕೊರೆಯಲೋ.." ಅನ್ನುವ ನಂದನ್..ಅರರೇ.. ಇವರಿಗೆ ಹಣ್ಣನ್ನು ತುಂಡುಮಾಡಿ ತಿನ್ನಿ ಎಂದು ಕೊಟ್ಟರೂ ಬೇಡ.. ಕೋಲ್ಡ್ ಬೇಕು.. ಕೋಲ್ಡ್ ಮಾಡಿ ತೆಗೆದುಕೊಂಡು ಹೋದರೆ ಅದು ಆರೆಂಜ್ ಕಲರ್ ಇದೆ, ರೆಡ್ ಇಲ್ಲ,ಮೆತ್ತಗಾಗಿದೆ,ಕಹಿಯಾಗಿದೆ,ಎಂದೆಲ್ಲ ಹೇಳುತ್ತಿದ್ದವರು ಈಗ ಹೇಗೆ ಒಮ್ಮಿಂದೊಮ್ಮೆಲೇ ಬದಲಾದರು ಎಂದು ಸಂಗೀತಾಳ ಪ್ರಶ್ನೆ..😍
"ಅಮ್ಮಾ ಈ ಅಲಸಂಡೆ ಕೊಯ್ಯಲಾ..?" ಎಂದು ಚಂದನ್ ಕೇಳಿದರೆ.."ಅದು ಮಾತ್ರವಲ್ಲ ಇದನ್ನೂ ಕೊಯ್ಯಬಹುದು.. ಕೊಯಿದು ತಿನ್ನಬಹುದು "ಎಂದು ತಿಂದು ತೋರಿಸಿದ ಮಧು.ಚಂದನ್ ನಂದನ್ ತಾವೂ ಎಳೆಯ ಮಿಡಿ ಅಲಸಂಡೆ ಜಗಿದರು.. ಆಹಾ ..
!!ಆಹಾ !!😋😋ಎಷ್ಟು ರುಚಿ ಎಂಬ ಉದ್ಗಾರ ಬೇರೆ.!! ಅಲಸಂಡೆ ಹೋಳು ಸಾಂಬಾರಿನಲ್ಲಿ ಸಿಕ್ಕರೆ ಪಕ್ಕಕ್ಕಿಟ್ಟು ಅದರೊಳಗಿನ ಬೀಜ ಮಾತ್ರ ತಿನ್ನುತ್ತಿದ್ದವರಲ್ಲಿ ಇಂದು ಈ ಬದಲಾವಣೆ..ಮೂಗಿನ ಮೇಲೆ ಬೆರಳಿಟ್ಟುಕೊಂಡಳು..
" .. ಅಮ್ಮಾ ಎಳೆಯ ಬದನೆಕಾಯಿ ವಾಂಗೀಬಾತ್ ಚೆನ್ನಾಗಿರುತ್ತೆ.. " ಎಂದು ಚಂದನ್ ಅಂದಾಗ " ಕೊಯ್ಯಿ."ಎಂದು ಹೇಳಿ ".ಏ... ಇವಳೇ.. ಅದರಿಂದ ಎಣ್ಣೇಗಾಯಿ ಮಾಡಿದರೆ ಸುಪರಾಗಿರುತ್ತೆ .. ನಾಳೆ ಅದನ್ನೇ ಮಾಡಾಯ್ತಾ "😄 ಎಂದು ತಾಕೀತು ಮಾಡಿದ ಮಧು.ಅಲ್ಲ ..ಬದನೆಕಾಯಿ ಕಹಿಯಾಗುತ್ತದೆ..ಒಗರಾಗುತ್ತೆ.. ಸಾಕಾಯ್ತು ಅನ್ನುತ್ತಿದ್ದವರು ಇವರೇನಾ..ಸಂಶಯ ಸಂಗೀತಳಿಗೆ..
ಬೆಳ್ಳಂಬೆಳಗ್ಗೆ ಆಚೆ ಬೀದಿಯ ಕೊನೇ ಮನೆಯ ವಿಶಾಲತ್ತೆ ಫೋನ್ ಮಾಡಿದರು "ಸಂಗೀತ ಇವತ್ತು ಹಾಲು ಸಿಕ್ಕಿದಾ..ಮಾವ ಇನ್ನು ಎದ್ದೇಯಿಲ್ಲ ಕಣೇ..ನಾವಾದರೂ ಹಾಲಿಲ್ಲದೆ ಬದುಕಿಯೇವು.. ಈ ನಾಲ್ಕು ಬೆಕ್ಕು ,ಎರಡು ನಾಯಿ ಮಾತ್ರ ಹಾಲಿಲ್ಲದೆ ಬಾಯಿಯೇ ಮುಚ್ಚುವುದಿಲ್ಲ ."ಎಂದಾಗ ಸಂದರ್ಭಕ್ಕೆ ತಕ್ಕಂತೆ ಸಂಗೀತಾ"ವಿಶಾಲತ್ತೆ.. ಇವತ್ತು ಮೂರೇ ಪ್ಯಾಕೆಟ್ ಹಾಲು ಸಿಕ್ಕಿದ್ದು.. ಪೋಲೀಸರು ಬಂದಾಗ ನಮ್ಮವರು ವಾಪಾಸಾದರಂತೆ.. ಆದ್ದರಿಂದ ಹೆಚ್ಚಿಲ್ಲ.. ಒಂದು ಪ್ಯಾಕೆಟ್ ಬೇಕಾದರೆ ಕೊಡುವ.."ಎಂದಾಗ "ಇಲ್ಲ.. ಫ್ರಿಡ್ಜ್ ನಲ್ಲಿ ತುಂಬಾ ಹಾಲಿನ ಪ್ಯಾಕೆಟ್ ಇದೆ"ಎಂದು ನಂದನ್ ಹೇಳಿಯೇಬಿಟ್ಟ..🙉🤭 ಮೆಲ್ಲನೆ ಚಿವುಟಿದಳು ಸಂಗೀತಾ..🤫🤫ನಂದನ್ ಮಾತು ವಿಶಾಲತ್ತೆಯ ಕಿವಿಗೆ ಬಿತ್ತೋ ಇಲ್ಲವೋ ಗೊತ್ತಿಲ್ಲ..ಮಧು ಸಂಗೀತಾಗಂತೂ ಫಜೀತಿಯನ್ನು ತಂದಿತ್ತು..😇
ಮದುವೆಯಾದಂದಿನಿಂದ ಹೇಳುತ್ತಲೇ ಇದ್ದಳು ಸಂಗೀತ "ರೀ..ಅತಿಯಾಗಿ ಟೀ, ಕಾಫಿ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದಲ್ಲ" ಎಂದು.ಮಧು ಕಿವಿಗೇ ಹಾಕಿಕೊಳ್ಳದೇ" ಏ.. ಇವಳೇ ..ಒಂದು ಗ್ಲಾಸ್ ಚಹಾ ತಾ.. ಸ್ಟ್ರಾಂಗ್ ಕಾಫಿ ಕುಡಿಯಬೇಕು ಬೇಗ ಮಾಡ್ಕೊಡು" ಎನ್ನುತ್ತಿದ್ದ ಮಧು ಈಗ "ಇವಳೇ ನಂಗೆ ಒಂದೇ ಗ್ಲಾಸ್ ಚಹಾ ಸಾಕು ಆಯ್ತಾ" ಎನ್ನುತ್ತಿದ್ದಾನೆ..😘😘
ಡಾಕ್ಟರ್ ಡಯಟ್ ಮಾಡಿ ವೆಯ್ಟ್ ಕಡಿಮೆ ಮಾಡಿಕೊಳ್ಳಿ ಎಂದರೂ ಕಿವಿಗೊಡದ ಸಂಗೀತಾ 68 ಕೆಜಿ ಇದ್ದವಳು ಈಗ 65 ಕ್ಕೆ ಇಳಿದಿದ್ದಾಳೆ ಎಂದು ಮಧು "ಈಗಲಾದರೂ ಡಯಟ್ ಮಾಡೋದಕ್ಕೆ ಶುರುಮಾಡಿದೆಯಲ್ಲಾ ಮಾರಾಯ್ತಿ... ಪುಣ್ಯ" ಎಂದು ನಗುತ್ತಿದ್ದರೆ..."ರೀ...ಬೆಳಗಿನಿಂದ ರಾತ್ರಿಯವರೆಗೆ ಮೂವರನ್ನು ಸಂಭಾಳಿಸಿ ವೇಯ್ಟ್ ಲಾಸ್ ಆದದ್ದು" ಅನ್ನಬೇಕೇ...🤣🤣😂😂
✍️...ಅನಿತಾ ಜಿ.ಕೆ.ಭಟ್.
01-04-2020.
ಕೊರೊನಾ ಕೋವಿಡ್ ಇಡೀ ಜಗತ್ತನ್ನೇ ನುಂಗುವಂತೆ ಅಟ್ಟಹಾಸಗೈಯುತ್ತಿದೆ. ಭಯದಿಂದ ನಡುಗುತ್ತಿರುವಾಗ ನಗುವುದು ಕಷ್ಟ.ಆದರೂ ದೈನಂದಿನ ಬದುಕಿನಲ್ಲಿ ಬರುವ ಚಿಕ್ಕಪುಟ್ಟ ಸನ್ನಿವೇಶಗಳನ್ನು ನೆನೆಸಿಕೊಂಡು ಹೊಟ್ಟೆಹುಣ್ಣಾಗುವಂತೆ ನಗುವುದಕ್ಕೆ ಯಾವುದೇ ಅಡೆತಡೆಯಿಲ್ಲ.ನಕ್ಕುನಕ್ಕು ರೋಗನಿರೋಧಕ ಶಕ್ತಿಯನ್ನು ವೃದ್ಧಿಸಿಕೊಳ್ಳುತ್ತಾ ಕೊರೊನಾ ಮಾರಿಯನ್ನು ಗೆಲ್ಲೋಣ.ಎಪ್ರಿಲ್ 1 ಹಾಸ್ಯಕ್ಕೆ ವಿಶೇಷ ತಾನೇ..?
ಸಂಗೀತ ಚಂದನ್ ನಂದನ್ ನನ್ನು ಓದಿಸುತ್ತಿದ್ದಾಳೆ.. ನಾಳೆ ಪರೀಕ್ಷೆಗೆ ರೆಡಿ ಆಗಬೇಕೆಂಬ ತರಾತುರಿ.. ಅಷ್ಟರಲ್ಲೇ ಮೊಬೈಲ್ ಟಿಣ್ ಎಂದಿತ್ತು. ಪರೀಕ್ಷೆ ಕ್ಯಾನ್ಸಲ್ ಮಾಡಲಾಗಿದೆ ಎಂಬ ಸುದ್ದಿ ಹೊತ್ತು ತಂದಿತು..ಆಹಾ..!! ಸಿಹಿಸುದ್ದಿ ಎಂದು ಕುಣಿದಾಡಿದ ನಂದನ್. 🤺🤸🤹ಚಂದನ್ ಗೆ ಮಾತ್ರ ಪರೀಕ್ಷೆ..ಹಾಗಾಗಿ ಇನ್ನು ದಿನವಿಡಿ ಅಮ್ಮನ ಮೊಬೈಲ್ ನನಗೆ ಎಂದು ಕುಣಿದಾಡಿ ಪುಸ್ತಕವನ್ನೆಲ್ಲ ಬದಿಗಿರಿಸಿ...ಬೀಗಿದ ನಂದನ್.🕺 ಚಂದನ್ ಪೆಚ್ಚು ಮುಖ ಹಾಕಿಕೊಂಡು ಕುಳಿತ. ಸಂಗೀತಾಳ ಓದು ಓದು ಎಂಬ ರಾಗ ಈಗ ಚಂದನ್ ಕಡೆಗೆ. ಕೊನೆಗೆ ಅವನ ಪರೀಕ್ಷೆಯೂ ಮುಂದೆ ಹೋಯ್ತಾ... ಈಗ ಅಪ್ಪನನ್ನು ಕೇಳುವುದೇ ಕೆಲಸ ಇಬ್ಬರಿಗೂ "ನಿಮಗೂ ರಜ ಇಲ್ವಾ.. ..?"
"ಇಲ್ಲ ಪುಟ್ಟ ..ಕಾಲೇಜು ಮಕ್ಕಳಿಗೆ ಮಾತ್ರ ರಜೆ."ಎಂದು ವಿವರಿಸಿದರು ಮಧುಕರ್..
"ಹಾಗಾದರೆ ನೀವು ಯಾರಿಗೆ ಪಾಠ ಮಾಡುವುದು ..? ಬೆಂಚ್ ಡೆಸ್ಕ್ ಗಾ..? ನಿಮಗೆಲ್ಲ ಕೊರೋನಾ ಏನೂ ಮಾಡಲ್ವಾ..?"😀😀
ನಗು ತಡೆಯಲಾಗಲಿಲ್ಲ ಅಪ್ಪ ಮಧುಕರ ನಿಗೆ.ಅಂತೂ ಕೆಲವು ದಿನದಲ್ಲಿ ಅಪ್ಪನಿಗೂ ರಜೆ ಸಿಕ್ಕಾಗ ಇಬ್ಬರು ಕುಣಿದಾಡಿದರು.. ಅಪ್ಪನ ಮೊಬೈಲ್ ನಂದನ್ ಗೆ. ಅಮ್ಮನ ಮೊಬೈಲ್ ಚಂದನ್ ಗೆ. ಇಬ್ಬರೂ ಆಡಿದ್ದೇ ಆಡಿದ್ದು. ಕೊನೆಗೆ ನೆಟ್ವರ್ಕ್ ಸಿಗದಿದ್ದಾಗ .. ಡಿಶುಂ ಡಿಶುಂ..🤜🤛🤼🤼 ಶುರುವಾಗಿತ್ತು...
ಕೊರೋನಾ ಲಾಕ್ಡೌನ್ ನಿಂದಾಗಿ ಸಾಮಗ್ರಿಗಳು ಹಾಲು ಸಿಗುವುದು ಸ್ವಲ್ಪ ಕಷ್ಟ.ಮಧುಕರ್ ಬೆಳಗ್ಗೆ ಹಾಲಿಗೆ ಹೋಗಿ ಬರಿಗೈಯಿಂದ ಹಿಂದಿರುಗಿದರು.. "ಅಲ್ಲಿ ಹಾಲು ಸಿಗಲಿಲ್ಲ "ಎನ್ನುವ ಮಾತು ತುಂಟ ಮಕ್ಕಳಿಗೆ ಕಿವಿಗೂ ಬಿದ್ದಿತು.🧒👦ಮಕ್ಕಳಿಗೆ ದಿನಕ್ಕೆರಡು ಲೋಟ ಹಾಲು ಕುಡಿಸಲು ಹರಸಾಹಸ ಪಡುತ್ತಿದ್ದಳು ಸಂಗೀತಾ.ಬೆಳಗ್ಗೆ ಕಷಾಯ ಮಾಡಿಕೊಟ್ಟರೆ ಮುಖ ಸಿಂಡರಿಸಿ ಇದು ಮೆಚ್ಚುವುದಿಲ್ಲ.. ಕೊತ್ತಂಬರಿ ಜೀರಿಗೆ ವಾಸನೆ ಬರುತ್ತೆ... ಅನ್ನುತ್ತಿದ್ದ ನಂದನ್ ಮೂರು ಬಾರಿ ಇನ್ನೂ ಬೇಕು.. ಇನ್ನೂ ಬೇಕು.. ಎಷ್ಟು ರುಚಿ ಕಷಾಯ ಎನ್ನುತ್ತಾ ಹಾಕಿಸಿಕೊಂಡು ಕುಡಿದ.. ಚಂದನ್ ಕೂಡಾ ಅಷ್ಟೇ 10 ಗಂಟೆಗೆ ಹಾಲಿನೊಂದಿಗೆ ತನಗೆ ಸಪ್ಪೆ ಮಾರಿ ಬಿಸ್ಕಿಟ್ ಮೆಚ್ಚುವುದಿಲ್ಲ ಎನ್ನುತ್ತಿದ್ದವ ಅರ್ಧ ಮಾರಿ ಬಿಸ್ಕೆಟ್ ಪ್ಯಾಕೆಟ್ ಹೊಟ್ಟೆಗಿಳಿಸಿದ. ಸಂಗೀತ ಕೊರೋನಾ ಮಕ್ಕಳಿಗೆ ಹಾಲಿನ ರುಚಿ ಕಲಿಸಿಬಿಟ್ಟಿತು ಎಂದುಕೊಂಡಳು.😘😘
ದೋಸೆಯ ಮೇಲೆ ಸಕ್ಕರೆ, ಇಡ್ಲಿಗೆ ಸಕ್ಕರೆ, ಕೊನೆಗೆ ಊಟಕ್ಕೂ ಸಕ್ಕರೆ ಬೇಕೆಂದು ಹಠ ಹಿಡಿದ ನಂದನನಿಗೆ "ನೋಡು ಇಷ್ಟೇ ಇರೋದು. ಸಕ್ಕರೆ 21ಕ್ಕೆ ಆಗಬೇಕು" ಎಂದು ಎಚ್ಚರಿಸಿದರು..ಸಂಗೀತಾ.ಆಗಾಗ ಬೀಳುವ ಮಾವಿನ ಹಣ್ಣನ್ನು ತಂದು ಜ್ಯೂಸ್ ಮಾಡುವ, ಹಣ್ಣಾದ ಚಿಕ್ಕು,ಪೆರಳೆ ಕಂಡರೆ ಮಿಲ್ಕ್ ಶೇಕ್ ಮಾಡುವ ಅನ್ನುತ್ತಿದ್ದ ಚಂದನ್ ಗೆ ಸಂಗೀತ "ಮಾವಿನ ಹಣ್ಣನ್ನು ಹಾಗೆ ಕಚ್ಚಿ ತಿನ್ನು ..ಇಲ್ಲದಿದ್ದರೆ ಸಾರು ಮಾಡೋಣ ..ಚಿಕ್ಕು,ಪೇರಳೆ ಹಾಗೆ ತಿಂದರೆ ಆರೋಗ್ಯಕ್ಕೆ ಒಳ್ಳೆಯದು "ಎಂದು ಪುಸಲಾಯಿಸಿ ಒಪ್ಪಿಸಿದಳು.. 😜ಮಕ್ಕಳಿಗೆ ಏನೋ ಗುಮಾನಿ.. ಅಪ್ಪ ತಂದ ಸಕ್ಕರೆಯನ್ನು ಅಮ್ಮ ಎಲ್ಲೋ ಅಡಗಿಸಿಟ್ಟಿದ್ದಾರೆ ಎಂದು.. ಸಂಜೆ ದೊಡ್ಡದಾಗಿ ಇರುವೆಯಸಾಲು ಹೋಗುತ್ತಿದ್ದರೆ ..ಇರುವೆಯ ಸಾಲನ್ನು ಪುಟಾಣಿ ಪಂಟರು ಹಿಂಬಾಲಿಸಿದರು.🕵️🕵️ ಅಕ್ಕಿಯ ಗೋಣಿಯ ಹಿಂದೆ ತುಂಬಿಸಿಟ್ಟಿದ್ದ ಸಕ್ಕರೆ ಡಬ್ಬ ಕಂಡದ್ದೇ ತಡ... ಕಳ್ಳನನ್ನು ಹಿಡಿದ ಪೋಲೀಸರಂತೆ ಸಂಭ್ರಮಿಸಿದರು." ಅಮ್ಮ ಸುಳ್ಳು ಹೇಳಿದ್ದು !!"ಎಂಬ ಪದ್ಯವೇ ಮಕ್ಕಳ ಬಾಯಲ್ಲಿ ಐದು ನಿಮಿಷ..😳😳ಸಾಮಾನು ತಂದು ತಂದು ಎಲ್ಲ ಡಬ್ಬಗಳಲ್ಲಿ ತುಂಬಿ ಕೊನೆಗೆ ಸಕ್ಕರೆಗೆಂದು ಉಳಿದ ಡಬ್ಬದ ಮುಚ್ಚಲ ಬಿಗಿಯಿರಲಿಲ್ಲ.. ರಜೆಯಲ್ಲಿದ್ದ ಮಧುಕರನಿಗೆ ಸಕ್ಕರೆಯಿಂದ ಇರುವೆ ಓಡಿಸುವ ಕೆಲಸ..ಪಾಪ..!!😠😡
ಈಗ ಆಹಾರ ಸಿಗದಿರುವ ಪರಿಸ್ಥಿತಿ ದನಗಳಿಗೂ ಗೊತ್ತಾಗಿದೆ ನೋಡಿ..ಸಂಗೀತ ಒಣಗಲೆಂದು ಎತ್ತರವಾದ ಕಾಂಪೌಂಡ್ ಕಟ್ಟೆಯಲ್ಲಿ ಬೆಲ್ಲದ ತಟ್ಟೆಯನ್ನಿಟ್ಟರೆ ಆ ಬದಿಯಿಂದ ದನವೊಂದು ತನ್ನ ನಾಲಿಗೆಯನ್ನು ಒಂದಡಿ ಉದ್ದಮಾಡಿ ತಿನ್ನಲು ಹವಣಿಸುತ್ತಿತ್ತು.. ಇದಕ್ಕೂ ಮೊದಲು ಹಲವಾರು ಬಾರಿ ಬೆಲ್ಲವಿಟ್ಟಾಗ ತಿನ್ನದಿದ್ದ ದನದ ಮೂಗು ಇಂದು ಮಾತ್ರ ಪರಿಮಳದ ಜಾಡು ಹಿಡಿದಿತ್ತು..
ಚವಿಹಣ್ಣು /ಕಾಕಮಾಚಿ ಹಣ್ಣು ಇತ್ತೀಚೆಗೆ ಹಕ್ಕಿಗಳ ಪಾಲಾಗುತ್ತಿದ್ದುದೇ ಹೆಚ್ಚು..ಈಗ ಮಾತ್ರ ದಿನಕ್ಕೆ ಮೂರು ಬಾರಿ ಅದರ ಗೆಲ್ಲುಗಳನ್ನು ಸರಿಸಿ ಹಣ್ಣು ಹುಡುಕಿ ಖಾಲಿಮಾಡುವ ನಂದನ್.."ಹಕ್ಕಿಗಳಿಗೆ ಚೂರು ಉಳಿಸೋ ಮಗಾ" ಎಂದು ಅಮ್ಮ ಗೋಗರೆದರೆ "ಹೋಗಮ್ಮಾ..ಹಕ್ಕಿಗಳಿಗೆ ರೆಕ್ಕೆ ಬಡಿದು ಹಾರಿ ಊರಿಡೀ ಸುತ್ತಿ ಹಣ್ಣು ತಿನ್ನಬಹುದು..ನಮಗೆ..ಹಾರಾಕಾಗಲ್ಲ.. ಪೇಟೆಯಿಂದ ಹಣ್ಣು ತಂದರೆ ಕೊರೋನಾ ಭಯ" ಎನ್ನುತ್ತಾ ಮನೆಯ ಹಿಂದೆ ಇರುವ ಗಿಡದಿಂದ ಹಣ್ಣುಕೊಯ್ಯಲು ಓಡಿದ.. ನಂದನ್.
ಸಂಗೀತ ಮಕ್ಕಳಲ್ಲಿ ಒಮ್ಮೆ ಮೊಬೈಲ್ ಕೇಳಿ ತನ್ನ ಕಥೆಯನ್ನು ವಾಯ್ಸ್ ಟೈಪಿಂಗ್ ಮಾಡತೊಡಗಿದಳು."ಸೌಜನ್ಯ ಕೇಶವ ಬೆಂಗಳೂರಿಗೆ ತೆರಳಿದರು"ಎಂದು ಹೇಳುತ್ತಾ ಅಕ್ಷರಗಳಲ್ಲಿಯೇ ಗಮನವಿರಿಸಿದ್ದಳು..
."ಅಯ್ಯೋ ಅಮ್ಮಾ..ಬೆಂಗಳೂರಿಗೆ ಹೋಗ್ತಾರಂತಾ.ಬೇಡ ಅನ್ನು... ಅಲ್ಲಿ ಕೊರೋನ ಜಾಸ್ತಿ ಇದೆಯಂತ ನ್ಯೂಸಿನಲ್ಲಿ ಬಂದಿತ್ತು"😲😲
..ಅಂದ ನಂದನ್ ನ ಮಾತಿಗೆ ಸಂಗೀತ ಮಧು ಇಬ್ಬರೂ ನಕ್ಕು ಸುಸ್ತಾದರು..ಅವನಿಗೇನು ಗೊತ್ತು ಅದು ಕಥೆ ಕಾಲ್ಪನಿಕ ಎಂದು.. ಇನ್ನು ಗಂಡ ಮಕ್ಕಳು ಮಲಗಿದ ಮೇಲೆಯೇ ಟೈಪಿಂಗ್ ಎಂದು ಕೆಲಸದತ್ತ ಮುಖ ಮಾಡಿದಳು.
ಹೊರಗಿನಿಂದ "ಅಮ್ಮಾ...ಪಪ್ಪಾಯ ಹಣ್ಣಾಗಿದೆಯಾ ನೋಡು..." ಎಂಬ ದನಿಕೇಳಿ ಕಿಟಕಿಯಿಂದ ನೋಡಿದಾಗ ...ಸಂಗೀತಾ ಹೌಹಾರಿ ...ಕಿಲಾಡಿ ಮಕ್ಕಳನ್ನು ಸುಮ್ಮನೆ ಬಿಟ್ಟರೆ ಹೀಗೆ ಎಂದು ಹೊರಗೋಡಿದಾಗ ಕಂಪೌಂಡ್ ಹತ್ತಿ ಪಪ್ಪಾಯಿ ಕೊಯಿದು ಕೈಯಲ್ಲಿ ಹಿಡಿದು ನಗುತ್ತಿದ್ದ ನಂದನ್.. ಮೊದಲು ಕಾಗಕ್ಕ ಹಣ್ಣಾಗಿದೆಯಾ ಎಂದು ಟೆಸ್ಟ್ ಮಾಡಿ ಟೇಸ್ಟ್ ನೋಡಿ ತನ್ನ ಬಳಗವನ್ನು ಕರೆಯುವಾಗಲೇ ಸಂಗೀತಾಗೆ ತಿಳಿಯುತ್ತಿದ್ದುದು ..!! 😆ಈಗ ಪೂರ್ತಿ ಹಣ್ಣಾಗುವ ಮೊದಲೇ ಕೊಯ್ದು ಒಳಗಿಟ್ಟು ಆಗಾಗ ಹಣ್ಣಾಗಿದೆಯಾ ಪರೀಕ್ಷಿಸಿ ಹಣ್ಣಾದಾಗ ಮೆಟ್ಟುಕತ್ತಿಯನ್ನಿಟ್ಟು" ಅಮ್ಮಾ.. ನೀವು ಕೊರೆಯುತ್ತೀರೋ ನಾನೇ ಕೊರೆಯಲೋ.." ಅನ್ನುವ ನಂದನ್..ಅರರೇ.. ಇವರಿಗೆ ಹಣ್ಣನ್ನು ತುಂಡುಮಾಡಿ ತಿನ್ನಿ ಎಂದು ಕೊಟ್ಟರೂ ಬೇಡ.. ಕೋಲ್ಡ್ ಬೇಕು.. ಕೋಲ್ಡ್ ಮಾಡಿ ತೆಗೆದುಕೊಂಡು ಹೋದರೆ ಅದು ಆರೆಂಜ್ ಕಲರ್ ಇದೆ, ರೆಡ್ ಇಲ್ಲ,ಮೆತ್ತಗಾಗಿದೆ,ಕಹಿಯಾಗಿದೆ,ಎಂದೆಲ್ಲ ಹೇಳುತ್ತಿದ್ದವರು ಈಗ ಹೇಗೆ ಒಮ್ಮಿಂದೊಮ್ಮೆಲೇ ಬದಲಾದರು ಎಂದು ಸಂಗೀತಾಳ ಪ್ರಶ್ನೆ..😍
"ಅಮ್ಮಾ ಈ ಅಲಸಂಡೆ ಕೊಯ್ಯಲಾ..?" ಎಂದು ಚಂದನ್ ಕೇಳಿದರೆ.."ಅದು ಮಾತ್ರವಲ್ಲ ಇದನ್ನೂ ಕೊಯ್ಯಬಹುದು.. ಕೊಯಿದು ತಿನ್ನಬಹುದು "ಎಂದು ತಿಂದು ತೋರಿಸಿದ ಮಧು.ಚಂದನ್ ನಂದನ್ ತಾವೂ ಎಳೆಯ ಮಿಡಿ ಅಲಸಂಡೆ ಜಗಿದರು.. ಆಹಾ ..
!!ಆಹಾ !!😋😋ಎಷ್ಟು ರುಚಿ ಎಂಬ ಉದ್ಗಾರ ಬೇರೆ.!! ಅಲಸಂಡೆ ಹೋಳು ಸಾಂಬಾರಿನಲ್ಲಿ ಸಿಕ್ಕರೆ ಪಕ್ಕಕ್ಕಿಟ್ಟು ಅದರೊಳಗಿನ ಬೀಜ ಮಾತ್ರ ತಿನ್ನುತ್ತಿದ್ದವರಲ್ಲಿ ಇಂದು ಈ ಬದಲಾವಣೆ..ಮೂಗಿನ ಮೇಲೆ ಬೆರಳಿಟ್ಟುಕೊಂಡಳು..
" .. ಅಮ್ಮಾ ಎಳೆಯ ಬದನೆಕಾಯಿ ವಾಂಗೀಬಾತ್ ಚೆನ್ನಾಗಿರುತ್ತೆ.. " ಎಂದು ಚಂದನ್ ಅಂದಾಗ " ಕೊಯ್ಯಿ."ಎಂದು ಹೇಳಿ ".ಏ... ಇವಳೇ.. ಅದರಿಂದ ಎಣ್ಣೇಗಾಯಿ ಮಾಡಿದರೆ ಸುಪರಾಗಿರುತ್ತೆ .. ನಾಳೆ ಅದನ್ನೇ ಮಾಡಾಯ್ತಾ "😄 ಎಂದು ತಾಕೀತು ಮಾಡಿದ ಮಧು.ಅಲ್ಲ ..ಬದನೆಕಾಯಿ ಕಹಿಯಾಗುತ್ತದೆ..ಒಗರಾಗುತ್ತೆ.. ಸಾಕಾಯ್ತು ಅನ್ನುತ್ತಿದ್ದವರು ಇವರೇನಾ..ಸಂಶಯ ಸಂಗೀತಳಿಗೆ..
ಬೆಳ್ಳಂಬೆಳಗ್ಗೆ ಆಚೆ ಬೀದಿಯ ಕೊನೇ ಮನೆಯ ವಿಶಾಲತ್ತೆ ಫೋನ್ ಮಾಡಿದರು "ಸಂಗೀತ ಇವತ್ತು ಹಾಲು ಸಿಕ್ಕಿದಾ..ಮಾವ ಇನ್ನು ಎದ್ದೇಯಿಲ್ಲ ಕಣೇ..ನಾವಾದರೂ ಹಾಲಿಲ್ಲದೆ ಬದುಕಿಯೇವು.. ಈ ನಾಲ್ಕು ಬೆಕ್ಕು ,ಎರಡು ನಾಯಿ ಮಾತ್ರ ಹಾಲಿಲ್ಲದೆ ಬಾಯಿಯೇ ಮುಚ್ಚುವುದಿಲ್ಲ ."ಎಂದಾಗ ಸಂದರ್ಭಕ್ಕೆ ತಕ್ಕಂತೆ ಸಂಗೀತಾ"ವಿಶಾಲತ್ತೆ.. ಇವತ್ತು ಮೂರೇ ಪ್ಯಾಕೆಟ್ ಹಾಲು ಸಿಕ್ಕಿದ್ದು.. ಪೋಲೀಸರು ಬಂದಾಗ ನಮ್ಮವರು ವಾಪಾಸಾದರಂತೆ.. ಆದ್ದರಿಂದ ಹೆಚ್ಚಿಲ್ಲ.. ಒಂದು ಪ್ಯಾಕೆಟ್ ಬೇಕಾದರೆ ಕೊಡುವ.."ಎಂದಾಗ "ಇಲ್ಲ.. ಫ್ರಿಡ್ಜ್ ನಲ್ಲಿ ತುಂಬಾ ಹಾಲಿನ ಪ್ಯಾಕೆಟ್ ಇದೆ"ಎಂದು ನಂದನ್ ಹೇಳಿಯೇಬಿಟ್ಟ..🙉🤭 ಮೆಲ್ಲನೆ ಚಿವುಟಿದಳು ಸಂಗೀತಾ..🤫🤫ನಂದನ್ ಮಾತು ವಿಶಾಲತ್ತೆಯ ಕಿವಿಗೆ ಬಿತ್ತೋ ಇಲ್ಲವೋ ಗೊತ್ತಿಲ್ಲ..ಮಧು ಸಂಗೀತಾಗಂತೂ ಫಜೀತಿಯನ್ನು ತಂದಿತ್ತು..😇
ಮದುವೆಯಾದಂದಿನಿಂದ ಹೇಳುತ್ತಲೇ ಇದ್ದಳು ಸಂಗೀತ "ರೀ..ಅತಿಯಾಗಿ ಟೀ, ಕಾಫಿ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದಲ್ಲ" ಎಂದು.ಮಧು ಕಿವಿಗೇ ಹಾಕಿಕೊಳ್ಳದೇ" ಏ.. ಇವಳೇ ..ಒಂದು ಗ್ಲಾಸ್ ಚಹಾ ತಾ.. ಸ್ಟ್ರಾಂಗ್ ಕಾಫಿ ಕುಡಿಯಬೇಕು ಬೇಗ ಮಾಡ್ಕೊಡು" ಎನ್ನುತ್ತಿದ್ದ ಮಧು ಈಗ "ಇವಳೇ ನಂಗೆ ಒಂದೇ ಗ್ಲಾಸ್ ಚಹಾ ಸಾಕು ಆಯ್ತಾ" ಎನ್ನುತ್ತಿದ್ದಾನೆ..😘😘
ಡಾಕ್ಟರ್ ಡಯಟ್ ಮಾಡಿ ವೆಯ್ಟ್ ಕಡಿಮೆ ಮಾಡಿಕೊಳ್ಳಿ ಎಂದರೂ ಕಿವಿಗೊಡದ ಸಂಗೀತಾ 68 ಕೆಜಿ ಇದ್ದವಳು ಈಗ 65 ಕ್ಕೆ ಇಳಿದಿದ್ದಾಳೆ ಎಂದು ಮಧು "ಈಗಲಾದರೂ ಡಯಟ್ ಮಾಡೋದಕ್ಕೆ ಶುರುಮಾಡಿದೆಯಲ್ಲಾ ಮಾರಾಯ್ತಿ... ಪುಣ್ಯ" ಎಂದು ನಗುತ್ತಿದ್ದರೆ..."ರೀ...ಬೆಳಗಿನಿಂದ ರಾತ್ರಿಯವರೆಗೆ ಮೂವರನ್ನು ಸಂಭಾಳಿಸಿ ವೇಯ್ಟ್ ಲಾಸ್ ಆದದ್ದು" ಅನ್ನಬೇಕೇ...🤣🤣😂😂
✍️...ಅನಿತಾ ಜಿ.ಕೆ.ಭಟ್.
01-04-2020.