#ಚೈತ್ರದ_ಸಂಭ್ರಮ
ಹಳೆಯ ಭಾವದ ಕದವ
ಮೆಲ್ಲಮೆಲ್ಲನೆ ಸರಿಸಿ
ಚೈತ್ರ ತರುತಿದೆ ಶುಭವ
ಎಲ್ಲನೋವನು ಮರೆಸಿ....||೧||
ಇಬ್ಬನಿಯ ಚಳಿಯಲಿ
ಮುದುಡಿದ ತರುಲತೆಗೆ
ಹೆಬ್ಬಯಕೆ ತೋರುತಲಿ
ಆದರಿಸಿದೆ ವಸಂತನೊಸಗೆ...||೨||
ಆಗಸವು ಮೋಡಗಳು
ಮರೆಯಾಗಿ ಶುಭ್ರತಾನು
ರವಿಯ ಕೆಣಕುವ ಕಿರಣಕೆ
ಭೂರಮೆಯು ನಾಚಿತಾನು...||೩||
ಬೇಗನೆ ಹಸಿರು ಸೀರೆಯನುಟ್ಟು
ನಲಿದಿಹಳು ಧರಣಿದೇವಿ
ಹೂ ಹಣ್ಣು ತುಂಬಿ ಫಲಬಿಟ್ಟು
ಕೆಡುಕನು ಒಳಿತಲಿ ಸುಡುವರವಿ||೪||
ಮಾಮರದ ತುಂಬೆಲ್ಲ ಹಸಿರು
ಮರೆಮಾಚಿ ಸರಿದಿದೆ
ನಸುಗೆಂಪು ತಂಬೆಲರು
ಸೊಂಪಾಗಿ ಚಿಗುರಿದೆ...||೫||
ಕುಕಿಲವು ಹರುಷದಿ
ಮೈಮರೆತು ಚಿಗುರ ಮೆದ್ದು
ಶಶಿಯು ತೆರಳಲನುವಾದ
ನಿಶೆಯ ಸರಸದಿ ಗೆದ್ದು...||೬||
ಉದಯರಾಗವ ಕುಕಿಲ
ಮನದಣಿಯೆ ಹಾಡಿದೆ
ಹೊಸರಾಗ ಹೊಸಭಾವ
ಭುವಿಬಾನನು ತಣಿಸಿದೆ...||೭||
ಪಂಚಮದ ಇಂಚರದಿ
ನವಗಾನ ಕೇಳಿಸಲಿ
ಪರಪಂಚದ ಜೀವಸಂಚಿಯಲಿ
ನವಚೈತನ್ಯ ಉಕ್ಕಲಿ...||೮||
ತಾಳಲಯವು ಶ್ರುತಿಸೇರಲಿ
ಹಳೆ ಅನುಭವದ ತಿರುಳಿನಲಿ
ಹೊಸಹೆಜ್ಜೆ ಹೊಸ ಕನಸು
ಹಳೆ ಸಿಹಿಕಹಿಯ ನೆರಳಿನಲಿ...||೯||
✍️... ಅನಿತಾ ಜಿ.ಕೆ.ಭಟ್.
25-03-2020.
ಎಲ್ಲರಿಗೂ ಯುಗಾದಿಯ ಹಾರ್ದಿಕ ಶುಭಾಶಯಗಳು 💐
ಸೌಹಾರ್ದ ಬಳಗದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಕವನ..
ವರ್ಣನೆ ಚೆನ್ನಾಗಿದೆ..
ReplyDeleteCongratulations...
ಧನ್ಯವಾದಗಳು 💐🙏
ReplyDelete