ನಿಶೆಯು ತಬ್ಬಿದಾಗ
ಮನೆಯ ಕಾದ ಶುನಕ
ವಿಷಯ ಕೇಳಿದಾಗ
ಬೊಗಳಿ ಕಾವ ಕಾಯಕ||೧||
ಉಷೆಯ ಕಿರಣ ಸೋಕಲು
ಮುದುರಿಕೊಂಡು ಬೆಚ್ಚನೆ
ಒಡೆಯನೊಲುಮೆ ವಿಶ್ವಾಸವ
ತಾನು ಗೆದ್ದು ಬಿಮ್ಮನೇ||೨||
ಹಸಿದ ಗೆಳತಿ ಮಹಿಷಿ
ನಿಂತು ಹುಲ್ಲು ಮೇಯುತಿದ್ದಿತು
ಮೈಯನೇರಿ ಕುಳಿತ ನಾಯಿ
ಕ್ಷಣದಿ ನಿದಿರೆಗಿಳಿಯಿತು||೩||
ಕೊರಳಬಳ್ಳಿ ಬಿಗಿದುಕೊಂಡು
ಕೆಸರಿನಲ್ಲಿ ನಿಂತರೂ
ಮಿತ್ರನೆಂದು ಇವನು ತನಗೆ
ಕೊಡುತ ಮೈಯ ಆಸರೆ||೪||
ಹಗಲಿರುಳು ಊರ ಕಾದವಗೆ
ಕನಸಿನಲ್ಲು ಕೇಡುಬಗೆಯದು
ಎಮ್ಮೆಗೆ ನಾಯಿ ಭಾರವೇ
ನಿಷ್ಕಲ್ಮಶ ಮನಸಿರೆ||೫||
ಮಾದರಿಯು ಮನುಜಗೆ
ಎಮ್ಮೆ-ಶುನಕ ಶುದ್ಧಸ್ನೇಹವು
ಮತ್ಸರ-ಚಿಂತೆ ಬಿಟ್ಟವಗೆ
ಒಲಿಯುವಂತಹ ಬಂಧವು||೬||
✍️... ಅನಿತಾ ಜಿ.ಕೆ.ಭಟ್.
26-02-2020.
ಚಿತ್ರ ಕೃಪೆ : ಹವಿಸವಿ ಬಳಗ
ಚಿತ್ರಕ್ಕೆ ಒಪ್ಪುವ ಕವನ...👌👌
ReplyDeleteಥ್ಯಾಂಕ್ಯೂ 💐🙏
ReplyDelete