Sunday, 24 November 2019

ನನ್ನ ತೋಟದ ಸೊಬಗು



ಪನ್ನೀರ ಗುಲಾಬಿಗೆ
ಹೊನ್ನೀರ ಸ್ನಾನ
ಕಂಡಿತ್ತು ಮುತ್ತು
ನಾ ಸೆರೆಹಿಡಿದ ಹೊತ್ತು...

              🌹🌹



ಸುರಿಯುತಿರುವ ಮಳೆಗೆ
ನಾನೀಗ ಪೂರ್ತಿ ಒದ್ದೆ
ನನಗೆ ಖುಷಿಯು ಒಳಗೊಳಗೆ
ಕೊಯ್ಯಲು ಬಂದವರು ಚಂಡಿಮುದ್ದೆ...

ಗಿಡವು ಹಸಿರಾಗಿ ಮೈತುಂಬಿದೆ
ಎಳೆಬದನೆಕಾಯಿ ಹೊಳೆಯುತಿದೆ
ನಾಲಿಗೆಯು ಏಕೋ ಜೊಲ್ಲು ಸುರಿಸುತಿದೆ
ಪೋಡಿ,ಎಣ್ಣೆಗಾಯಿ ನೆನಪಾಗಿಬಿಟ್ಟಿದೆ...

                      🌹🌹



ಭಾರ ತಾಳಲಾಗದ ಹೂವೇ
ನಾನು ನಿನಗೆ ಹೆಗಲಾಗುವೇ...
ಕ್ಷಣಿಕದ ಚೆಲುವಿನ ಬಾಳಲಿ
ನನ್ನ ಅಳಿಲಸೇವೆ ಇರಲಿ...

ನಿನ್ನ ಚೆಲುವಿಕೆಗೆ ಸೋಲುವ ಜನ
ಆಗ ನೋಡುವರು ಒಮ್ಮೆ ನನ್ನ
ಹಸಿರಾಗಿಹ ನನಗೂ ಬಂತು ಬೆಲೆ
ಕ್ಷಣಿಕವಾಗಿ ಜನಮನಗೆದ್ದ ಎಲೆ...


                   🌹🌹




ಬೆನ್ನಿಗೆ ಬೆನ್ನು ಹಾಕಿ ನಿಂತವರೇ
ಅಹಂ ಏಕೆ ನಿಮ್ಮಿಬ್ಬರೊಳಗೆ ....

ಇಂದು ಅರಳುವ ಸಮಯ
ದಿನಗಳುರುಳುತ ಅಳಿವು ನಿಶ್ಚಯ....

ಹರಡಿದ ಪರಿಮಳದ ನೆನಪು ಶಾಶ್ವತ
ಅಂದವು ಕುಂದುವುದು  ವಿಧಿಲಿಖಿತ....

                  🌹🌹


ನಾನೇ ಸುಂದರಿಯೆಂದು ಜಂಭದಲಿ ಬೀಗುವಳು ಕಿಸ್ಕಾರ...
ಪ್ರೀತಿಯಲಿ ಭಕ್ತಿಯಲಿ ದೇವಿಗೆ ಆಗುವಳು ಹಾರ...
ಹೂವಿನ ಅಬ್ಬರಕೆ ಗೆಲ್ಲಬಾಗುತಲಿ ತಾಳುವಳು ಭಾರ...

✍️ ಅನಿತಾ ಜಿ.ಕೆ.ಭಟ್.
25-11-2019.

No comments:

Post a Comment