ಹೊನ್ನೀರ ಹನಿ ಹನಿ
ತೊಯ್ದು ತಂಪಾದ ಅವನಿ
ಹೂವಿಗೆ ಎಸಳು ಕಣ್ಮಣಿ
ಹೊತ್ತು ನಿಂತಿದೆ ಕೆಂಪು ಮಣಿ...
🌹🌹
ಮರೆಯಲಿ ನಿಂದವಳೆ
ಅರಳಿ ರವಿಯ ಕರೆದವಳೆ
ಪರಿಮಳ ಹರಡಿದವಳೆ
ಸುರುಳಿಯೆಂಬ ಚಿನಕುರಳಿ
ಸುಗಂಧಿಯೆಂಬ ಹೆಸರಿನವಳು
ಶುಭೋದಯ ಹೇಳಲು ಬಂದವಳೆ...
🌹🌹
ಅಂದದಲಿ ಸೆಳೆಯುವಳು ಸೇವಂತಿ
ಗುಲಾಬಿಯು ಹೂಗಳಲ್ಲೇ ಅಂದಗಾತಿ
ಮಲ್ಲಿಗೆಯೇ ...ಘಮ್ಮೆಂದು ಪಸರಿಸುತಿ
ಹೆಸರು ಹೇಳುವೆನು ಮಧುಮಾಲತಿ.....
🌹🌹
ನಗುವೊಂದು ಮಾಗುವ ಮುನ್ನ
ಮಗದೊಂದು ಅರಳಿರೆ ಚೆನ್ನ...
ಜಗದೊಳಗೆ ಹಲವು ಬಗೆ
ಮಗುವ ನಗೆ ಹೂವ ನಗೆ ಹಿತವೆನಗೆ...
ನನ್ನಂಗಳದ ನಗುವ ಜರ್ಬೇರ
ಕಣ್ಸೆಳೆವ ನೋಟ ಸುಂದರ....
🌹🌹
ಮೊದಲ ಮಳೆಯ ಸ್ಪರ್ಶ
ಹೂವು ಹಸಿರು ಹರ್ಷ...
ಕಣ್ಣಿಗೆ ಕಂಡ ನೋಟವು ಚೊಕ್ಕ
ಇಂದಿನ ಚಿತ್ರವು ಬಿಳಿಯ ಎಕ್ಕ...
ಕರೆಯುವರಂತೆ ಇದನು ಶ್ವೇತಾರ್ಕ
ಶಿವನಿಗೆ ಅರ್ಪಿಸಿ ಸಿದ್ಧಿಸಲಿ ಸಕಲಕಾರ್ಯ...
✍️... ಅನಿತಾ ಜಿ.ಕೆ.ಭಟ್
25-11-2019.
No comments:
Post a Comment