Tuesday, 26 May 2020

ಸಾಧನೆಗೆ ವಯಸ್ಸಿಗಿಂತ ಮನಸ್ಸು ಮುಖ್ಯ

         
  ಬೇಬಿಹಾಲ್ದೆರ್ ಎಲ್ಲರಂತೆ ತಾನೂ ವಿದ್ಯೆ ಕಲಿಯಬೇಕೆಂದು ಕನಸು ಕಂಡವಳು.ಅವಳ ಕುಡುಕ ತಂದೆ ಆಕೆಗೆ ಹನ್ನೆರಡನೇ ವಯಸ್ಸಿನಲ್ಲಿ ಮದುವೆ ಮಾಡಿದರು. ‌ಹದಿನೈದು ವಯಸ್ಸಾಗುತ್ತಿದಂತೆ ಮೂರುಮಕ್ಕಳ ತಾಯಿಯಾದವಳಿಗೆ ಕುಡುಕ ಗಂಡನ ಉಪಟಳ ತಡೆಯದೆ ಕಸಮುಸುರೆಯೇ ಆಸರೆಯಾಯಿತು.

           ಶ್ರೀಮಂತರ ಮನೆಯಲ್ಲಿ ಕಸಗುಡಿಸುವಾಗ ಸಿಕ್ಕ ಪುಸ್ತಕಗಳನ್ನು ಓದುತ್ತಾ ಮೈಮರೆಯುತ್ತಿದ್ದಳು.ಪ್ರಸಿದ್ಧ ಕತೆಗಾರ ಮುನ್ಶಿ ಪ್ರೇಮಚಂದ ರಮೊಮ್ಮಗ ಪ್ರಭೋಧ್ ಕುಮಾರ್ ಅವರಲ್ಲಿ ಮನೆಕೆಲಸ ಮಾಡುತ್ತಿದ್ದಾಗ ಇವಳ ಓದುವ ಆಸಕ್ತಿಗೆ ಅವರು ಬೆಂಬಲವಿತ್ತು ಬೆಂಗಾಲಿ ಪುಸ್ತಕಗಳನ್ನು ತಂದುಕೊಡುತ್ತಿದ್ದರು.

ಪ್ರಾಥಮಿಕ ಹಂತದಲ್ಲೇ ಶಾಲೆಬಿಟ್ಟು ಇಪ್ಪತ್ತು ವರ್ಷಗಳ ನಂತರ
ನಿವೃತ್ತ ಪ್ರೊಫೆಸರ್ ಆದ ಪ್ರಬೋಧ್ ಅವರ ಪ್ರೋತ್ಸಾಹದಿಂದ ತನ್ನದೇ ಕಥೆಯ ಪುಸ್ತಕವೊಂದನ್ನು ಬರೆದಳು.ಪ್ರಬೋಧ್ ಕುಮಾರ್ ತಿದ್ದಿ ವ್ಯಾಕರಣ,ಭಾಷಾಶುದ್ಧತೆಗೆ ಅಗತ್ಯ ಸಲಹೆನೀಡಿದರು.ಅವಳ ಪುಸ್ತಕ Aalo Aandhari  ಬೆಸ್ಟ್ ಸೆಲ್ಲರ್ ಪಟ್ಟಿಗೆ ಸೇರಿತು.ಅವಳ ಪುಸ್ತಕಗಳು ಜಗತ್ತಿನ ಪ್ರಮುಖ ಇಪ್ಪತ್ತನಾಲ್ಕು ಭಾಷೆಗಳಿಗೆ ಭಾಷಾಂತರಗೊಂಡವು.ವಿವಿಧ ದೇಶಗಳ ಸಾಹಿತ್ಯ ಗೋಷ್ಠಿಗಳಲ್ಲಿ ಭಾಗವಹಿಸುವ ಅವಕಾಶ ದೊರಕಿತು.ಆಸಕ್ತಿ,ಕಠಿಣ ಪರಿಶ್ರಮವಿದ್ದರೆ ಸಾಧನೆಗೆ ವಯಸ್ಸು ತೊಡಕಲ್ಲ ಎಂಬುದನ್ನು ನಿರೂಪಿಸಿದರು.

✍️...ಅನಿತಾ ಜಿ.ಕೆ.ಭಟ್.
14-05-2020.

Momspresso Kannada 100 ಪದದ ಕಥೆ.. ಸಾಧನೆಗೆ ವಯಸ್ಸಿಗಿಂತ ಮನಸ್ಸು ಮುಖ್ಯ..

No comments:

Post a Comment