ಚಂದದ ಮೊಗದ ಕನ್ಯೆಯವಳು
ಅಂದದಿಂದಲಿ ಝರಿ ಸೀರೆಯುಟ್ಟು
ಇಂದಿರೇಶನ ಪ್ರಿಯವಧುವಾಗಲು
ಬಂದು ಮಂಟಪದಿ ನಿಂದಿಹಳು||೧||
ಮುಡಿಯ ತುಂಬಾ ಮಲ್ಲೆಹೂವು
ಕಾಡಿಗೆಯು ತೀಡಿದ ಕುಡಿಹುಬ್ಬು
ಜಡೆಯು ನೀಳ ಬಂಗಾರ ಧರಿಸಿ
ಹಿಡಿದು ಕರದಲಿ ಪುಷ್ಪಮಾಲೆ||೨||
ಮಂಗಳವಾದ್ಯ ಮೊಳಗುತಿರಲು
ಕಂಗಳಲ್ಲಿ ತುಂಬಿ ನೂರು ಕನಸು
ಅಂಗೀರಸ ಗೋತ್ರದ ಅಂದಗಾತಿ
ಅಂಗನೆಯಾದಳು ಇಂದಿರೇಶನಿಗೆ||೩||
ಮುದ್ದು ಕೂಸವಳು ತವರುಮನೆಗೆ
ಒದ್ದುಸೇರ ಗೃಹಲಕ್ಷ್ಮಿಯಾದಳು ಈಶಗೆ
ಇದ್ದು ಚೆಂದದಿ ಬಾಳಿ ನೂರು ವರುಷ
ಬಂಧುಮಿತ್ರರು ಬಂದು ಹರಸಿದರು||೪||
ಮನದ ಮರೆಯಲಿ ದುಗುಡ ತುಂಬಿ
ಕನಸ ತೇರಲಿ ವಯಸು ಸಂಭ್ರಮಿಸಿ
ಅನವರತ ಪತಿಯ ನೆರಳಾಗಿ ನಡೆವಳು
ತನುಮನದಿ ಕುಲದ ಏಳ್ಗೆ ಬಯಸುವಳು||೫||
✍️... ಅನಿತಾ ಜಿ.ಕೆ.ಭಟ್.
30-05-2020.
ಸಾಂದರ್ಭಿಕ ಚಿತ್ರ :- ಅಂತರ್ಜಾಲ ಕೃಪೆ
Pratilipi Kannada ದೈನಿಕ ವಿಷಯ:- ಮಂಗಳ ವಾದ್ಯ ಮೊಳಗುತಿರಲು...
No comments:
Post a Comment