ನಾವು ಭಾರತೀಯರು
ನಾವು ಭಾರತೀಯರು
ಹೆಮ್ಮೆಯಿಂದ ಎದೆಯತಟ್ಟಿ ಹೇಳ್ವೆವು
ಪುಣ್ಯ ಪವಿತ್ರ ಭರತ ಭೂಮಿ
ಮಡಿಲು ನಮಗೆ ನಾಕವು||೧||
ಹಿಮದ ಮುಕುಟ ಹಸಿರಸೆರಗು
ಪದತಲದಲಿ ಮುತ್ತಿಕ್ಕುವ ಶರಧಿ
ಸಿರಿಫಲದ ಕಣಜ ಬಾಳ್ವ ಖಗಮೃಗಮನುಜ
ಪೊರೆದಿದೆ ತಾಯಿ ಭಾರತಿಯೊಡಲು ||೨||
ಆಚಾರ್ಯಸಂತರ ಪಾದ ಸೋಕಿದನಾಡು
ಪತಂಜಲಿ ವ್ಯಾಸವಾಲ್ಮೀಕಿಮಹರ್ಷಿಗಳ ಬೀಡು ಗಂಗೆ ತುಂಗೆ ಯಮುನೆ ಹರಿವ ನಾಡಿನಲಿ
ಜನುಮ ಪಡೆದ ನಾವು ಭಾರತೀಯರು||೩||
ನಡುಗುವ ಚಳಿಯಲಿ ಗಡಿಕಾವ ಯೋಧ
ಸೋಂಕು ತಡೆಗೆ ಸಜ್ಜಾಗಿಹ ದಾದಿ ವೈದ್ಯ
ನೇಗಿಲಯೋಗಿ ,ಹಲವಿಧ ಕರ್ಮಿಗಳ
ಒಕ್ಕೊರಲ ದನಿ ನಾವು ಭಾರತೀಯರು||೪||
ಜಾತಿಮತಗಳ ಭೇದವನಳಿಸಿ
ತಾಯ್ನೆಲದ ಸಂಸ್ಕೃತಿ ವೈಭವ ಮೆರೆಸುವ
ಪ್ರಕೃತಿ ಸಿರಿಯನು ಜತನದಿ ಉಳಿಸಿ
ಪ್ರೀತಿ ಶಾಂತಿಯ ದೀಪವ ಬೆಳಗುವ||೫||ನಾವು ಭಾರತೀಯರು||
✍️... ಅನಿತಾ ಜಿ.ಕೆ.ಭಟ್.
15-08-2020.
ಅಲ್ಲಮ ಸಾಂಸ್ಕೃತಿಕ ವೇದಿಕೆ ಏರ್ಪಡಿಸಿದ ರಾಷ್ಟ್ರೀಯ ರಕ್ಷಾಬಂಧನ ಕವಿಗೋಷ್ಠಿ (ಆನ್ಲೈನ್)ಯಲ್ಲಿ ದತ್ತ ಶೀರ್ಷಿಕೆ 'ನಾವು ಭಾರತೀಯರು' -ಇದಕ್ಕಾಗಿ ಬರೆದು ವಾಚಿಸಿದ ಕವನ.https://youtu.be/n7dpo-3NWDg
No comments:
Post a Comment