Thursday, 27 August 2020

ಮಾತೆ ಚೇತನ-ದೇಶಭಕ್ತಿ ಗೀತೆ/kannada patriotic song

 


#ಮಾತೆ_ಚೇತನ

ಒಡಲ ಕುಡಿಗಳಿಗೆಲ್ಲ ಚೇತನ
ಮಾತೆ ತುಂಬುತ ಸಂತತ
ಸೋಲನರಿಯದ ಅಶ್ವವಾಗಿಹೆ
ವಿಶ್ವಗುರು ನೀ ಭಾರತ..||೧||

ಕಲೆಯ ಸೆಲೆಯು ಕಡಲ ಅಲೆಯು
ಚಿಮ್ಮುತಿಹುದು ನಿತ್ಯವೂ
ವೀರಮಣಿಗಳ ಜ್ಞಾನಗಣಿಗಳ
ಮಡಿಲು ನಿನ್ನದು ಸತ್ಯವು..||೨||

ಸಮಸ್ತ ಲೋಕದ ಹಿತವ ಬಯಸುವ
ಶ್ರೇಷ್ಠ ನಿನ್ನ ಚಿಂತನೆ
ಕೇಡು ಕಲಿಗಳ ಸೇಡಿನುಲಿಗಳ
ಮಟ್ಟಗೈಯ್ಯುವೆ ಕುಲವನೇ..||೩||

ಸಂತ ಮಹಿಮರು ಸಿರಿಯ ತುಹಿನವು
ವೇದಶಾಸ್ತ್ರ ಪುರಾಣವು
ಕ್ಷಿಪಣಿ ಶೋಧನೆ ನವೀನ ಸಾಧನೆ
ತಂತ್ರಜ್ಞಾನ ನಾಗಾಲೋಟವು...||೪||

ವಸುದೈವಕುಟುಂಬಂ ವಂದೇಗೋಮಾತರಂ
ನಿನ್ನ ನಿತ್ಯ ತತ್ವವು
ಪೂಜ್ಯ ಆತಿಥ್ಯತೆ ಮಾತೆ ದೇವತೆ
ಐಕ್ಯತೆಯೆ  ಮಣ್ಣಕಣದ ಸತ್ವವು...||೫||

ಮಾನವೀಯತೆ ಪರಹಿತ ಸ್ನೇಹದಿ
ಬರೆದೆ ಜಯದ ಭಾಷ್ಯವ
ಕಾರ್ಯತಂತ್ರ ಶಾಂತಿಮಂತ್ರ
ಜ್ಞಾನಸೂತ್ರದಿ ಸೆಳೆದ ನೀ ವಿಶ್ವವ..||೬||

✍️...ಅನಿತಾ ಜಿಕೆ ಭಟ್
27-08-2020.


No comments:

Post a Comment